Advertisement

Protest: ಕುಡಿಯುವ ನೀರಿಗಾಗಿ ರಸ್ತೆತಡೆ, ರಾತ್ರಿ ವೇಳೆ ಖಾಲಿ ಕೊಡ ಹಿಡಿದು ಪ್ರತಿಭಟನೆ

11:03 PM Apr 10, 2024 | Team Udayavani |

ವಿಜಯಪುರ : ಕುಡಿಯುವ ನೀರಿಗಾಗಿ ನಗರದ ಆಶ್ರಯ ರಸ್ತೆಯ ನಿವಾಸಿಗಳು ರಾತ್ರಿ ವೇಳೆ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.

Advertisement

ಬುಧವಾರ ರಾತ್ರಿ ಏಕಾಏಕಿ ರಸ್ತೆಗೆ ಇಳಿದ ನಗರದ ಆಶ್ರಯ ರಸ್ತೆಯ ಪಾಲಿಕೆಯ ವಾರ್ಡ ನಂ.12 ರ ವಿವಿಧ ಬಡಾವಣೆಯ ನಿವಾಸಿಗಳು, ರಸ್ತೆ ಸಂಚಾರ ಬಂದ್ ಮಾಡಿ ಧರಣಿ‌ ಕುಳಿತರು.

ಕುಡಿಯುವ ನೀರು ಕೊಡದ ವಿಜಯಪುರ ಮಹಾನಗರ ಪಾಲಿಕೆ, ಪಾಲಿಕೆ ಸದಸ್ಯೆ, ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಕಿಡಿಕಾರಿದರು.

ಕಳೆದ 15 ದಿನಗಳಿಂದ ತಮ್ಮ ಬಡಾವಣೆಗೆ ನೀರು ಬರುತ್ತಿಲ್ಲ. ತಾವು ಆಯ್ಕೆ ಮಾಡಿ ಕಳಿಸಿದ ವಾರ್ಡ್ ನಂ.12 ಸದಸ್ಯೆ ಸೌಜನ್ಯಕ್ಕೂ ತಮ್ಮ ಸಮಸ್ಯೆ ಆಲಿಸಲು ಬಂದಿಲ್ಲ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿದ ಆದರ್ಶನಗರ ಠಾಣೆ ಪೊಲೀಸರು ಧರಣಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರ ಮನವೊಲಿಸಲು ಪ್ರಯತ್ನ ನಡೆಸಿದರು‌

Advertisement
Advertisement

Udayavani is now on Telegram. Click here to join our channel and stay updated with the latest news.

Next