Advertisement

ಸಂವಿಧಾನದ ಕಾನೂನುಗಳಿಂದ ಕಾರ್ಮಿಕರ ರಕ್ಷಣೆ

06:31 PM May 24, 2022 | Team Udayavani |

ಗೌರಿಬಿದನೂರು: ಕಾರ್ಮಿಕರ ಅಭಿವೃದ್ಧಿಗೆ ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಹಲವಾರು ಸವಲತ್ತು ನೀಡಿ ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರೆಂದು ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ತಿಳಿಸಿದರು.

Advertisement

ನಗರದ ಹೊರವಲಯದಲ್ಲಿರುವ ಸಾಮಾನತಾ ಸೌಧದಲ್ಲಿ ಅಂಬೇಡ್ಕರ್‌ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘ, ಶೀಟ್‌ ಸೆಂಟರಿಂಗ್‌ ಕಾರ್ಮಿಕರ ಸಂಘ, ಕರ್ನಾಟಕ ಜಾಗೃತಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳ ಕಾರ್ಮಿಕರ ಸಂಘ, ಹಮಾಲಿ ಕಾರ್ಮಿಕರ ಸಂಘ ಎಲೆಕ್ಟ್ರಿಷಿಯನ್‌ ಮತ್ತು ಪ್ಲಂಬಿಂಗ್‌ ಕಾರ್ಮಿಕ ಸಂಘ, ವೆಲ್ದಿಂಗ್‌ ಕಾರ್ಮಿಕ ಸಂಘ ಹಾಗೂ ಇತರೆ ಸಂಘಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾರ್ಮಿಕ ದಿನಚರಣೆ ಹಾಗೂ ಉಚಿತ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಮಿಕರು ಈ ದೇಶದ ಬೆನ್ನೆಲುವು ಅವರ ಪರಿಶ್ರಮದಿಂದ ಈ ದೇಶದ ಆರ್ಥಿಕ ಮಟ್ಟ ಏರಿಕೆಯಾಗಿದೆ. ಅಂಬೇಡ್ಕರ್‌ ಅವರು ಕಾನೂನು ಮಂತ್ರಿಯಾದ ವೇಳೆ ಕಾರ್ಮಿಕ ವಲಯದಲ್ಲಿ ಹಲವಾರು ಬದಲಾವಣೆ ತಂದರು. ಕೆಲಸದ ವೇಳೆ ನಿಗದಿಯಾದ ವೇತನ ಪರಿಷ್ಕರಣೆ, ನಿವೃತ್ತಿಯಾದ ನೌಕರರಿಗೆ ಪಿಂಚಣೆ ಹೀಗೆ ಹತ್ತಾರು ಸವಲತ್ತು ನೀಡಿದ್ದಾರೆ ಎಂದರು.

ಕಾರ್ಮಿಕ ಸಂಘದ ಅಧ್ಯಕ್ಷ ವೆಂಕಟಾದ್ರಿ ಮಾತನಾಡಿ, ಸರ್ಕಾರ ಕಾರ್ಮಿಕರ ಕಲ್ಯಾಣಕ್ಕೆ ಹಲವು ಸೌಲಭ್ಯಗಳನ್ನು ನೀಡಿದೆ. ಇಂದು ಅವರಿಗೆ ಉಚಿತ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಿದೆ ಇದರಿಂದ ಅವರಿಗೆ ಹಲವು ಕಾಯಿಲೆಗಳಿಗೆ ಉಚಿತ ಔಷಧಿ ಸಿಗಲಿದೆ ಎಂದರು. ಇದೇ ವೇಳೆ ಕಾರ್ಮಿಕರಿಗೆ ಆಯುಷ್ಮಾನ್‌ ಭಾರತ್‌, ಆರೋಗ್ಯ ಕರ್ನಾಟಕ ಕಾರ್ಡ್‌ ಉಚಿತವಾಗಿ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್‌ ಪುತ್ಥಳಿ ಅನಾವರಣ ಮಾಡಲಾಯಿತು.

ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ವರಲಕ್ಷ್ಮಿ ಅಂಬೇಡ್ಕರ್‌ ಸಂಘದ ಅಧ್ಯಕ್ಷ ವೆಂಕಟಾದ್ರಿ, ದಲಿತ ಮುಖಂಡ ಸೋಮಯ್ಯ, ವಕೀಲ ಸಂಘದ ಅಧ್ಯಕ್ಷ ಡಿ.ರಾಮದಾಸ್‌, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಮರಳೂರು ಹನುಮಂತರೆಡ್ಡಿ, ನಗರಸಬೆ ಸದಸ್ಯ ವೆಂಕಟರೆಡ್ಡಿ, ಕಾರ್ಮಿಕ ಮುಖಂಡ ಜಬೀ, ಇಂತಿಯಾಜ್‌, ನಜೀರ್‌, ಇಡಗೂರು ವೈ.ಟಿ.ಪ್ರಸನ್ನಕುಮಾರ್‌, ನಗರಸಭೆ ಸದಸ್ಯ ರಫೀಕ್‌, ಸತ್ಯಪ್ರಕಾಶ್‌ ಮುಖಂಡ ವೆಂಕಟ್‌, ವೇದಲವೇಣಿ ವೇಣು, ಸುದರ್ಶನ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next