Advertisement

ಮಹಿಳೆಯ ರಕ್ಷಣೆ: ಸಖಿ ಸೆಂಟರ್‌ಗೆ ದಾಖಲು

07:40 PM Mar 18, 2023 | Team Udayavani |

ಉಡುಪಿ: ಬೈಂದೂರು ಮೂಲದ ಮಹಿಳೆ ಶ್ರೀಮತಿ ಶೆಟ್ಟಿ (65) ಅವರು ತಮ್ಮ ಮಗನ ಕಿರುಕುಳ ತಾಳಲಾರದೆ ಜೀವ ಭಯದಿಂದ ಮನೆ ಬಿಟ್ಟು ಬಂದಿದ್ದು, ಸಮಾಜ ಸೇವಕ ವಿಶು ಶೆಟ್ಟಿ ಅವರ ನೆರವಿನಿಂದ ಉಡುಪಿಯ ಸಖೀ ಒನ್‌ಸೆಂಟರ್‌ಗೆ ಶನಿವಾರ ದಾಖಲಾಗಿದ್ದಾರೆ.

Advertisement

ಮಹಿಳೆಯ ಪತಿ ತೀರಿಕೊಂಡಿದ್ದು, ಕುಟುಂಬದ ಜವಾಬ್ದಾರಿ ಹೊರ ಬೇಕಾದ ಮಗ ತಾಯಿಗೆ ನಿತ್ಯ ಹಲ್ಲೆ ಮಾಡುತ್ತಿದ್ದ. ಪೊಲೀಸರ ಮೊರೆ ಹೋದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಸಮಾಜಸೇವಕರು ಹಿರಿಯರ ಸಹಾಯವಾಣಿಗೆ ಮಾಹಿತಿ ನೀಡಿದ್ದು, ಅದರಂತೆ ಸಖಿ ಸೆಂಟರ್‌ಗೆ ದಾಖಲಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next