Advertisement

ನಾಲ್ಕು ಒಂಟೆಗಳ ರಕ್ಷಣೆ

12:13 PM Aug 10, 2018 | Team Udayavani |

ಬೆಂಗಳೂರು: ಪಾದರಾಯನಪುರದ ಅರಾಫತ್‌ ನಗರದ ಕೊಳೆಗೇರಿ ಪ್ರದೇಶದಲ್ಲಿ ಗುರುವಾರ ಅಕ್ರಮವಾಗಿ ಇರಿಸಿಕೊಂಡಿದ್ದ ನಾಲ್ಕು ಒಂಟೆಗಳನ್ನು ಜಗಜೀವನ್‌ರಾಮ್‌ ನಗರ ಪೊಲೀಸರು ರಕ್ಷಿಸಿದ್ದಾರೆ. ಒಂಟೆಗಳನ್ನು ಕಳ್ಳಸಾಗಣೆ ಮೂಲಕ ತಂದು ಕೂಡಿಹಾಕಲಾಗಿದೆ ಎಂದು ಸರ್ಕಾರೇತರ ಸಂಸ್ಥೆ ಗೋ ಗ್ಯಾನ್‌ ಫೌಂಡೇಶನ್‌ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

Advertisement

ಹೀಗಾಗಿ ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಒಂಟೆಗಳನ್ನು ರಕ್ಷಿಸಿದ್ದರು. ಬಳಿಕ ಒಂಟೆಗಳನ್ನು ಕೋರಮಂಗಲದ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next