Advertisement

ಕ್ಯಾರ್ ಚಂಡಮಾರುತ: ಕಾರವಾರದಲ್ಲಿ ಐವರು ಮೀನುಗಾರರ ರಕ್ಷಣೆ

03:00 PM Oct 26, 2019 | Team Udayavani |

ಸುರತ್ಕಲ್: ಮೀನುಗಾರಿಕೆಗೆ ತೆರಳಿ ಕಾರವಾರ ಸಮುದ್ರ ಬಳಿ ಕ್ಯಾರ್ ಚಂಡಮಾರುತಕ್ಕೆ ಸಿಲುಕಿದ್ದ ಐವರು ಮೀನುಗಾರರನ್ನೊಳಗೊಂಡ ಬೋಟ್ ಅನ್ನು ಕರಾವಳಿ ರಕ್ಷಣಾ ಪಡೆಯವರು ರಕ್ಷಣೆ ಮಾಡಿದ ಘಟನೆ ನಡೆದಿದೆ.

Advertisement

ಕರಾವಳಿ ರಕ್ಷಣಾ ಪಡೆಯ ಅಮರ್ತ್ಯಾ ಹಡಗನ್ನು ಬಳಸಿ ಕಾರ್ಯಾಚರಣೆ ನಡೆಸಿದ್ದು, ರಕ್ಷಿಸಿದ ಎಲ್ಲಾ ಮೀನುಗಾರರನ್ನು ಕಾರವಾರ ಬಂದರಿಗೆ ಕರೆತರಲಾಗಿದ್ದು, ಆಹಾರ ಮತ್ತು ವೈದ್ಯಕೀಯ ಸೌಲಭ್ಯ ನೀಡಲಾಗಿದೆ.

ಕ್ಯಾರ್ ಚಂಡಮಾರುತದ ಪರಿಣಾಮವಾಗಿ ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡಿನ 500ಕ್ಕೂ ಹೆಚ್ಚು ಮೀನುಗಾರಿಕಾ ಬೋಟ್ ಗಳು ಕಾರವಾರ ಬಂದರಿನಲ್ಲಿ ಲಂಗರು ಹಾಕಿವೆ.

Advertisement

Udayavani is now on Telegram. Click here to join our channel and stay updated with the latest news.

Next