Advertisement

ಜೀತದಾಳುಗಳಂತೆ ದುಡಿತ ಸಂಕಷ್ಟದಲ್ಲಿದ್ದ 7 ಮಂದಿಯ ರಕ್ಷಣೆ

11:35 PM Dec 19, 2019 | Sriram |

ಪುತ್ತೂರು: ಸಕಲೇಶಪುರ ತಾಲೂಕಿನ ಹೊನ್ನೆಹಿತ್ಲುವಿನ ಎಸ್ಟೇಟ್‌ ಒಂದರಲ್ಲಿ ಜೀತದಾಳುಗಳಂತೆ ನಿಕೃಷ್ಟವಾಗಿ ದುಡಿತಕ್ಕಿದ್ದ ಕಡಬ ತಾಲೂಕಿನ ಏಳು ಮಂದಿಯನ್ನು ಅಲ್ಲಿಂದ ರಕ್ಷಿಸಿ ಕರೆತರುವಲ್ಲಿ ದ.ಕ. ಜಿಲ್ಲಾ ದಲಿತ ಸೇವಾ ಸಮಿತಿಯ ಮುಖಂಡರು ಯಶಸ್ವಿಯಾಗಿದ್ದಾರೆ.

Advertisement

ಕೋಡಿಂಬಾಳ ಗ್ರಾಮದ ಪಾಜೋವಿನ ಪರಿಶಿಷ್ಟ ಜಾತಿಯ ಈ 7 ಮಂದಿ ಸಕಲೇಶಪುರ ಹೊನ್ನೆಹಿತ್ಲುವಿನ ಎಸ್ಟೇಟ್‌ ಒಂದರಲ್ಲಿ 2011ರಿಂದೀಚೆಗೆ ಸುಮಾರು 8 ವರ್ಷಗಳಿಂದ ದುಡಿಯುತ್ತಿದ್ದರು. ಎಸ್ಟೇಟ್‌ ಮಾಲಕ ಅವರಿಗೆ ಸರಿಯಾದ ವೇತನವನ್ನೂ ನೀಡುತ್ತಿರಲಿಲ್ಲ ಎನ್ನಲಾಗಿದೆ.

ಈ ಕುರಿತು ಮಾಹಿತಿ ಪಡೆದ ದ.ಕ. ಜಿಲ್ಲಾ ದಲಿತ ಸೇವಾ ಸಮಿತಿಯ ನಿಯೋಗವು ಎಸ್ಟೇಟ್‌ಗೆ ಭೇಟಿ ನೀಡಿ, ಸಕಲೇಶಪುರ ತಾಲೂಕಿನ ಹಿರಿಯ ಕಾರ್ಮಿಕ ಅಧಿಕಾರಿಯ ಮೂಲಕ ಗ್ರಾಮಾಂತರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ಡಿ.17ರಂದು ಸಂತ್ರಸ್ತರನ್ನು ಕರೆತರಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next