Advertisement

ಪ್ರವಾಹದಲ್ಲಿ ಸಿಲುಕಿದ‌ ಇಬ್ಬರಿಂದ ರಕ್ಷಣೆ‌ ಮೊರೆ

09:50 AM Oct 22, 2019 | mahesh |

ವಿಜಯಪುರ : ಜಿಲ್ಲೆಯಲ್ಲಿ ಮಳೆಯ ರೌದ್ರಾವತಾರ ಮುಂದು ವರೆದಿದ್ದು, ಡೋಣಿ ನದಿ ಪ್ರವಾಹದಲ್ಲಿ ಇಬ್ಬರು ಸಿಲುಕಿಕೊಂಡು ರಕ್ಷಣೆಗೆ ಮೊರೆ ಇಡುತ್ತಿರುವ ಘಟನೆ ಜರುಗಿದೆ.

Advertisement

ಹೊನಗನಹಳ್ಳಿ ಬಳಿ ಇರುವ ಡೋಣಿ ನದಿಯ ಪ್ರವಾಹದಲ್ಲಿ ಸಿಲುಕಿರುವ ಇಬ್ಬರು ತಮ್ಮನ್ನು ರಾಕ್ಷಸುವಂತೆ ಕೈಬೀಸಿ ಅಂಗಲಾಚುತ್ತಿದ್ದಾರೆ.

ನದಿಯ ಮಧ್ಯದಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ರಕ್ಷಣೆ ಮಾಡಲು ಜಿಲ್ಲಾಡಳಿತದ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಈಗಾಗಲೇ ಡೋಣಿ ನದಿ ಕಳೆದ ಮೂರ್ನಾಲ್ಕು ದಿನಗಳಿಂದ ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿದೆ. ಇಂಥ ಸ್ಥಿತಿಯಲ್ಲಿ ಈ ಇಬ್ಬರು ನದಿಯ ಆಳಕ್ಕೆ ಹೋಗಿದ್ದು ಏಕೆ ಎಂಬುದು ಸ್ಪಷ್ಟವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next