Advertisement

ಕಾಶ್ಮೀರದ ಕೆಲವು ಪ್ರದೇಶದಲ್ಲಿ ನಿಷೇಧಾಜ್ಞೆ ಮರುಜಾರಿ

09:49 AM Aug 19, 2019 | keerthan |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿದ್ದನ್ನು ವಿರೋಧಿಸಿ, ಕಾಶ್ಮೀರದ ಕೆಲವೆಡೆಗಳಲ್ಲಿ ಹಾಕಲಾಗಿದ್ದ ನಿಷೇಧಾಜ್ಞೆ ತೆರವುಗೊಳಿಸುತ್ತಿರುವಾಗಲೇ, ಶ್ರೀನಗರದ ಕೆಲವು ಭಾಗಗಳಲ್ಲಿ ಮತ್ತೆ ಗಲಭೆ ನಡೆದ ಬಗ್ಗೆ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂಟರ್ನೆಟ್‌, ಫೋನ್‌ ಸೇವೆಗಳನ್ನು 5 ಜಿಲ್ಲೆಗಳಲ್ಲಿ ಮತ್ತೆ ರದ್ದುಗೊಳಿಸಲಾಗಿದೆ.

Advertisement

ಶನಿವಾರ ರಾತ್ರಿಯಿಂದೀಚೆಗೆ ಕೆಲವು ಅಹಿತಕರ ಘಟನೆಗಳು ನಡೆದಿದ್ದು, ಈ ಹಿನ್ನೆಲೆಯಲ್ಲಿ ಕೂಡಲೇ ನಿಷೇಧಾಜ್ಞೆಯನ್ನು ಮರುಜಾರಿಗೊಳಿಸಲಾಗಿದೆ. ಗಲಭೆ ವೇಳೆ 12ಕ್ಕೂ ಹೆಚ್ಚು ಪೊಲೀಸರು ಮತ್ತು ನಾಗರಿಕರು ಗಾಯಗೊಂಡಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶನಿವಾರ ನಿಷೇಧಾಜ್ಞೆಯನ್ನು ವಾಪಸ್‌ ಪಡೆಯಲಾಗಿದ್ದು, ಕೆಲವೆಡೆ ಸಂಚಾರ, ವ್ಯಾಪಾರ ಎಂದಿನಂತೆ ನಡೆದಿತ್ತು. ಆದರೆ ರಾತ್ರಿಯಾಗುತ್ತಿದ್ದಂತೆ ಅಹಿತಕರ ಘಟನೆಗಳು ನಡೆದಿವೆ. ಗುಂಪುಗಳನ್ನು ಚದುರಿಸಲು ಪೊಲೀಸ್‌ ಪಡೆಗಳು ಅಶ್ರವಾಯು ಮತ್ತು ಚಿಲ್ಲಿ ಗ್ರೆನೇಡ್ ಗಳನ್ನು ಬಳಸಿದ್ದಾಗಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next