Advertisement

ಹಾಸನದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ವಶ

10:57 AM Jun 10, 2019 | Team Udayavani |

ಹಾಸನ: ಪ್ಲಾಸ್ಟಿಕ್‌ ನಿಷೇಧ ಆಂದೋಲನ ಆರಂಭಿಸಿರುವ ಹಾಸನ ನಗರಸಭೆ ನೌಕರರು ಭಾನುವಾರವೂ ನಗರದ ವಿವಿಧ ಸಗಟು ವ್ಯಾಪಾರಿ ಮಳಿಗೆಗಳು ಹಾಗು ಟ್ರಾನ್ಸ್‌ಪೋರ್ಟ್‌ ಗೋದಾಮುಗಳ ಮೇಲೆ ದಾಳಿ ನಡೆಸಿ ಸಾವಿರಾರು ರೂ. ಮೌಲ್ಯದ ನಿಷೇಧಿತ ಪ್ಲಾಸ್ಟಿಕ್‌ ಕವರ್‌ಗಳನ್ನು ವಶಪಡಿಸಿದಕೊಂಡರು.

Advertisement

ನಗರದ ಶ್ರೀ ಚೌಡೇಶ್ವರಿ ದೇವಾಲಯ ರಸ್ತೆ ಬಳಿ ಇರುವ ಎಸ್‌.ಆರ್‌.ಕೆ. ಟ್ರೇಡರ್ ಗೋದಾಮು ಸೇರಿದಂತೆ ವಿವಿ ಧೆಡೆ ಹಾಸನ ನಗರಸಭೆ ಆರೋಗ್ಯಾಧಿ ಕಾರಿಗಳು ದಾಳಿ ಮಾಡಿ ಪ್ಲಾಸ್ಟಿಕ್‌ ಕವರ್‌ಗಳು, ಪ್ಲಾಸ್ಟಿಕ್‌ ಲೋಟಗಳು ಸೇರಿದಂತೆ ನಿಷೇಧಿತ ಪ್ಲಾಸ್ಟಿಕ್‌ನ್ನು ವಶಪಡಿಸಿ ಕೊಂಡರು. ನಿಷೇಧಿತ ಪ್ಲಾಸ್ಟಿಕ್‌ ಬಳಕೆ, ಮಾರಾಟ ಮಾಡಬಾರದೆಂದು ಹಲ ವಾರು ಬಾರಿ ಸೂಚನೆ ನೀಡಿದರೂ ಸಗಟು ವ್ಯಾಪಾರ ಮಾಡುತ್ತಿದ್ದ ಮಾಹಿತಿ ಅಧರಿಸಿ ನಗರಸಭೆ ಆರೋಗ್ಯ ನಿರೀಕ್ಷಕ ಆದೀಶ್‌ ಕುಮಾರ್‌ ಮತ್ತು ಮಂಜುನಾಥ್‌ ಅವರು ಸಿಬ್ಬಂದಿ ಯೊಂದಿಗೆ ದಾಳಿ ನಡೆಸಿದರು.

ಗೋದಾಮುಗಳಲ್ಲಿ ಚೀಲಗಟ್ಟಲೆ ದಾಸ್ತಾನಿದ್ದ ನಿಷೇಧಿತ ಪ್ಲಾಸ್ಟಿಕ್‌ನ್ನು ವಶಕ್ಕೆ ಪಡೆದುಕೊಂಡ ನಗರಸಭೆ ನೌಕರರು ವ್ಯಾಪಾರಿಗಳಿಗೆ ದಂಡ ವಿಧಿಸಿದ್ದು, ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿದರು. ಹಾಸನ ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧಿಸಿದ್ದರೂ ಪ್ಲಾಸ್ಟಿಕ್‌ ಬಳಕೆ ಮಾತ್ರ ನಿಂತಿಲ್ಲ. ಹಾಗಾಗಿ ನಗರಸಭೆ ಸಿಬ್ಬಂದಿ ಸಗಟು ಮಾರಾಟ ಮಳಿಗೆಗಳು ಹಾಗೂ ಲಾರಿ ಟ್ರಾನ್ಸ್‌ಫೋರ್ಟ್‌ಗಳ ಗೋದಾಮುಗಳ ಮೇಲೆ ದಾಳಿ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next