Advertisement

ಹೈನುಗಾರಿಕೆಯಿಂದ ಲಾಭ: ವೆಂಕಟೇಶ್‌

02:21 PM Oct 22, 2020 | Suhan S |

ಭಾರತೀನಗರ: ಹಾಲು ಉತ್ಪಾದಕರುಗುಣಮಟ್ಟದ ಹಾಲು ಸರಬರಾಜು ಮಾಡುತ್ತಿದ್ದಾರೆ. ಸಂಘದ ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಘ ಉತ್ತಮ ಬೆಳವಣಿಗೆ ಕಂಡಿದೆ ಎಂದು ಸಂಘದ ಅಧ್ಯಕ್ಷ ವೆಂಕಟೇಶ್‌ ತಿಳಿಸಿದರು.

Advertisement

ಎಸ್‌.ಐ.ಹೊನ್ನಲಗೆರೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಡೆದಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿಮಾತನಾಡಿ, ಹೈನುಗಾರಿಕೆಯು ಒಂದು ಉಪಕಸುಭಾಗಿದೆ. ಹೈನುಗಾರಿಕೆಯಿಂದ ಉತ್ತಮ ಲಾಭಾಂಶವನ್ನು ಕಾಣಬಹುದು.ಆದ್ದರಿಂದ ರೈತರು ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಬೇಕು ಎಂದರು.

ಜೀವನಕ್ಕೆ ತೊಂದರೆ ಇಲ್ಲ: ಇತ್ತೀಚಿನ ದಿನಗಳಲ್ಲಿ ಕೆಲವರು ಮಾತ್ರ ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಈ ಹಿಂದೆ ಗ್ರಾಮದ ಜನ ಸಂಖ್ಯೆಗಿಂತ ಹೆಚ್ಚು ಹಸು, ಎಮ್ಮೆ, ಕುರಿ, ಮೇಕೆ ಇದ್ದವು. ಆದರೆ, ಇಂದು ಅವುಗಳೆಲ್ಲಾ ಮಾಯ ವಾಗುತ್ತಿವೆ. ಹೆಚ್ಚು ಹೈನುಗಾರಿಕೆಯಲ್ಲಿತೊಡಗಿದರೆ. ತಮ್ಮ ಜೀವನ ನಿರ್ವಹಣೆಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.

ಸಂಘ 1977ರಲ್ಲಿ ಸ್ಥಾಪನೆಗೊಂಡು ಪ್ರಥಮಬಾರಿಗೆ ಎಚ್‌.ಕೆ.ಸುಬ್ಬಯ್ಯ ಅವರು ಅಧ್ಯಕ್ಷರಾಗಿ ಉತ್ತಮ ಆಡಳಿತ ನಡೆಸಿದ್ದರು ಎಂದು ಸಂಘದನಿರ್ದೇಶಕರು ಸ್ಮರಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಎಚ್‌.ಎನ್‌.ಕೆಂಪೇ ಗೌಡ ವಾರ್ಷಿಕ ಮಹಾಸಭೆಯ ನಡವಳಿಕೆಯನ್ನು ಓದಿ ಅಂಗೀಕರಿಸಿದರು.

ಸಂಘದ ಉಪಾಧ್ಯಕ್ಷ ಎಚ್‌.ಎಸ್‌.ಮಹ ದೇವಪ್ಪ, ನಿರ್ದೇಶಕರಾದ ಕೆಂಪರಾಜು, ಮಂಜು, ಎಚ್‌.ಕೆಂಪೇಗೌಡ, ಮರಿಸ್ವಾಮಿ, ಕೆಂಪೇಗೌಡ, ಎಚ್‌.ಸಿ.ಪುಟ್ಟಸ್ವಾಮಿ, ಪುಟ್ಟಮ್ಮ, ತಾಯಮ್ಮ, ಮಾಜಿ ಅಧ್ಯಕ್ಷ ಶಿವಸ್ವಾಮಿ, ಮಾದೇಗೌಡ, ಕೆಂಪರಾಜು, ಪುಟ್ಟಸ್ವಾಮಿ, ಮಹದೇವು, ಪುನೀತ್‌, ನಾಗರಾಜು ಹಾಜರಿದ್ದರು.

Advertisement

ನೀರಿನ ಯೋಜನೆ ಆರಂಭಿಸಲು ಸರ್ವೆ :

ಮದ್ದೂರು: ಮದ್ದೂರಮ್ಮ ಕೆರೆಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನುಆರಂಭಿಸಲು ಒತ್ತುವರಿಯಾಗಿದ್ದ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿ, ತೆರವುಗೊಳಿಸಿದರು.

ತಾಲೂಕಿನ ದೇಶಹಳ್ಳಿ ಗ್ರಾಮದ ಮದ್ದೂರಮ್ಮ ಕೆರೆ ಬದಿಯಲ್ಲಿದ್ದ ಗುಂಡು ತೋಪು ಸರ್ವೆ ನಂ.59ರ 4 ಎಕರೆ 7 ಗುಂಟೆ ಜಮೀನನ್ನು ತಹಶೀಲ್ದಾರ್‌ ವಿಜಯಕುಮಾರ್‌ ಆದೇಶದ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸರ್ವೆ ಕಾರ್ಯ ಕೈಗೊಂಡು ಜಾಗ ಗುರುತಿಸಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಕೈಗೊಳ್ಳಲು ಅವಕಾಶ ಕಲ್ಪಿಸಿದರು.

17ಕ್ಕೂ ಹೆಚ್ಚು ಮಂದಿ ಒತ್ತುವರಿ: ಮದ್ದೂರಮ್ಮ ಕೆರೆ ಬದಿಯಲ್ಲಿದ್ದ ಸರ್ಕಾರಿ ಜಮೀನನ್ನು ದೇಶಹಳ್ಳಿ ಗ್ರಾಮದ17ಕ್ಕೂ ಹೆಚ್ಚು ಮಂದಿ ರೈತರು ಒತ್ತುವರಿ ಮಾಡಿಕೊಂಡಿದ್ದರು. ಕಳೆದ ವಾರದ ಹಿಂದೆ ತಾಲೂಕು ಆಡಳಿತ ನೋಟಿಸ್‌ ಜಾರಿ ಮಾಡಿ, ಜಮೀನನ್ನು ತೆರವುಗೊಳಿಸುವಂತೆ ಆದೇಶ ನೀಡಲಾಯಿತು. ಹೀಗಾಗಿ ಸ್ಥಳಕ್ಕೆ ಕಂದಾಯ, ಪೊಲೀಸ್‌ ಹಾಗೂ ಇನ್ನಿತರೆ ಅಧಿಕಾರಿಗಳು ಭೇಟಿ ನೀಡಿ, ಸರ್ಕಾರಿ ಜಮೀನನ್ನು ವಶಕ್ಕೆ ಪಡೆದರು. ಕೆಲ ರೈತರು ಜಮೀನಿನಲ್ಲಿ ಬೆಳೆ ಬೆಳೆದಿದ್ದು, ಒಂದು ವಾರ ಅವಕಾಶ ನೀಡಲಾಗಿದೆ. ಕಟಾವು ಮುಗಿದ ಬಳಿಕ ಸರ್ಕಾರಿ ವಶಕ್ಕೆ ಪಡೆಯುವುದಾಗಿ ಅಧಿಕಾರಿಗಳು ತಿಳಿಸಿದರು.

ಕಂದಾಯ ರಾಜಸ್ವ ನಿರೀಕ್ಷಕ ವೆಂಕಟೇಶ್‌, ತಾಲೂಕು ಸರ್ವೆ ಅಧಿಕಾರಿಹನುಮೇಗೌಡ, ಗ್ರಾಮಲೆಕ್ಕಿಗಡಿ.ತಿಮ್ಮಯ್ಯಹಾಗೂ ಪೊಲೀಸ್‌ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next