Advertisement

ವೃತ್ತಿಪರ ಕೌನ್ಸೆಲಿಂಗ್‌: ತಾಂತ್ರಿಕ ಅಡಚಣೆಗಳನ್ನು ಬೇಗನೆ ಸರಿಪಡಿಸಿ

12:45 AM Oct 22, 2022 | Team Udayavani |

ಭಾರೀ ವಿಳಂಬದ ಬಳಿಕ ಸಿಇಟಿ ಮತ್ತು ಯುಜಿ ನೀಟ್‌ ಕೌನ್ಸೆಲಿಂಗ್‌ ಶುರುವಾಗಿದ್ದು, ಈಗ ಇದಕ್ಕೆ ತಾಂತ್ರಿಕ ಅಡಚಣೆಯ ಸಮಸ್ಯೆ ತಲೆದೋರಿದೆ. ಹೀಗಾಗಿ, ಯುಜಿ-ನೀಟ್‌ ಅರ್ಜಿಗಳನ್ನು ತುಂಬುವ ಕಡೇ ದಿನಾಂಕವನ್ನು ಅ.25ರ ವರೆಗೆ ಮುಂದೂಡಿಕೆ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ಕೊಂಚ ನಿರಾಳತೆಯನ್ನೂ ನೀಡಲಾಗಿದೆ.

Advertisement

ಈ ನಡುವೆಯೇ, ಪ್ರಸಕ್ತ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ವೆಬ್‌ಸೈಟ್‌ ಕೈಕೊಡಲು ಕಾರಣವೇನು ಎಂಬ ಬಗ್ಗೆ ಚರ್ಚೆಗಳೂ ಆರಂಭವಾಗಿವೆ. ಕೆಇಎ ಅಧಿಕಾರಿಗಳ ಪ್ರಕಾರ, 15 ವರ್ಷಗಳ ಹಳೆಯ ಸಾಫ್ಟ್ವೇರ್‌ ನಿಂದಾಗಿಯೇ ಈ ತಾಂತ್ರಿಕ ಸಮಸ್ಯೆಗಳಾಗುತ್ತಿವೆ. ಇದನ್ನು ಸರಿಪಡಿಸಲು ನೋಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಹಾಗೆಯೇ, ರಾಜ್ಯ ಸರಕಾರದ ಗಮನಕ್ಕೂ ತಂದು, ಸಮಸ್ಯೆಯನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಕೋರಿಕೊಂಡಿದ್ದಾರೆ.

ಸದ್ಯ ಕೆಇಎ ವೆಬ್‌ಸೈಟ್‌ ಮೂಲಕವೇ ಸಿಇಟಿ ಎಂಜಿನಿಯರಿಂಗ್‌, ಯುಜಿ ನೀಟ್‌, ಪಿಜಿ ನೀಟ್‌, ಕೆಪಿಟಿಸಿಎಲ್‌ ಪರೀಕ್ಷೆ, ಸ್ನಾತಕೋತ್ತರ ಎಂಡಿ ಮತ್ತು ಎಂಎಸ್‌, ಸಹಾಯಕ ಶಿಕ್ಷಕರ ನೇಮಕ ಸೇರಿದಂತೆ ಹಲವಾರು ಪರೀಕ್ಷೆ ಗಳ ಕುರಿತಂತೆ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ. ಹೀಗಾಗಿಯೇ ಸಮಸ್ಯೆ ತಲೆದೋರಿದೆ ಎಂದು ಕೆಇಎ ಅಧಿಕಾರಿಗಳು ಹೇಳಿದ್ದಾರೆ.

ಏನೇ ಇರಲಿ, ಸಿಇಟಿ ಮತ್ತು ಯುಜಿ ನೀಟ್‌ ವಿದ್ಯಾರ್ಥಿಗಳಿಗಂತೂ ಈ ತಾಂತ್ರಿಕ ಸಮಸ್ಯೆ ನಿದ್ದೆ ಇಲ್ಲದಂತೆ ಮಾಡಿದೆ. ಕೆಲವು ವಿದ್ಯಾರ್ಥಿಗಳ ಮನೆ ಗಳಲ್ಲಿ ಹಗಲು ರಾತ್ರಿ ಈ ವೆಬ್‌ಸೈಟ್‌ ಸರಿಯಾಯಿತೇ ಎಂದು ಕಾದು ನೋಡುವುದೇ ಆಗಿದೆ. ಕೆಲವೊಬ್ಬ ವಿದ್ಯಾರ್ಥಿಗಳು 12 ಗಂಟೆಗಳ ಕಾಲ ಈ ವೆಬ್‌ಸೈಟ್‌ ಮುಂದೆ ಕುಳಿತು ಅರ್ಜಿ ಸಲ್ಲಿಸಲು ಕಾದಿದ್ದಾರೆ. ಆದರೂ ಇವರ ಸಮಸ್ಯೆ ಬಗೆಹರಿದಿಲ್ಲ ಎನ್ನುವುದು ಖೇದಕರ.

ವಿಚಿತ್ರವೆಂದರೆ ಈ ವರ್ಷದ ಸಿಇಟಿ ಆರಂಭವಾದಾಗಿನಿಂದಲೂ ವಿದ್ಯಾರ್ಥಿ ಗಳಿಗೆ ಒಂದಿಲ್ಲೊಂದು ಸಮಸ್ಯೆ ತಲೆದೋರುತ್ತಲೇ ಇದೆ. ಆರಂಭ ದಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಕೇವಲ ಸಿಇಟಿ ಅಂಕ ಪರಿ ಗಣನೆ ಮಾಡುತ್ತೇವೆ ಎಂದು ಹೇಳಿ ಈ ವಿದ್ಯಾರ್ಥಿಗಳು ಕೋರ್ಟ್‌ಗೆ ಹೋದ ಮೇಲೆ ಸಮಸ್ಯೆ ತಿಳಿಯಾಯಿತು.
ಇದರಿಂದಾಗಿಯೂ ಸಿಇಟಿ ಕೌನ್ಸೆಲಿಂಗ್‌ ಕೂಡ ತಡವಾಗಿ ಆರಂಭ ವಾಯಿತು. ಅತ್ತ ನೀಟ್‌ ಫ‌ಲಿತಾಂಶ ಕೂಡ ಈ ಭಾರಿ ತೀರಾ ತಡವಾಗಿಯೇ ಬಂದಿದೆ. ಇದರ ಪ್ರವೇಶ ಪ್ರಕ್ರಿಯೆ ಕೂಡ ಈಗಷ್ಟೇ ನಡೆಯುತ್ತಿದೆ.

Advertisement

ಈಗಲೂ ಕಾಲ ಮಿಂಚಿಲ್ಲ. ರಾಜ್ಯ ಸರಕಾರ ಈ ಕೂಡಲೇ ಎಚ್ಚೆತ್ತು ತಾಂತ್ರಿಕವಾಗಿ ಏನೇನು ಸಮಸ್ಯೆಗಳಾಗಿವೆ ಎಂಬುದನ್ನು ನೋಡಿಕೊಳ್ಳ  ಬೇಕು. ಅಲ್ಲದೆ ಇಡೀ ದೇಶದಲ್ಲೇ ಕರ್ನಾಟಕ ತಾಂತ್ರಿಕತೆಯ ವಿಚಾರದಲ್ಲಿ ಮುಂದಿ ರುವ ರಾಜ್ಯ. ಇಲ್ಲೇ ಸರ್ವರ್‌ ರೀತಿಯ ಸಮಸ್ಯೆಗಳು ಕಾಣಿಸಿ   ಕೊಂಡರೆ ಅದು ನಾಚಿಕೆಗೇಡಿನ ವಿಚಾರವಾಗುತ್ತದೆ. ಈ ಬಗ್ಗೆ ಸರಕಾರ ಗಮನಹರಿಸಬೇಕು. ಅಲ್ಲದೆ ಈಗ ಬಳಕೆ ಮಾಡುತ್ತಿರುವ ಸಾಫ್ಟ್ ವೇರ್‌ ಕೂಡ 15 ವರ್ಷ ಹಳೆಯದಾಗಿದ್ದು, ಈಗಿನ ಒತ್ತಡಕ್ಕೆ ಇದು ಕಾರ್ಯ ನಿರ್ವ ಹಿಸುವ ಸಾಧ್ಯತೆಗಳು ಕಡಿಮೆಯೇ. ಇದನ್ನು ಅಪ್‌ಡೇಟ್‌ ಮಾಡುವತ್ತ ಗಮನ ಹರಿಸಬೇಕು.

ಹಾಗೆಯೇ ಏಕಕಾಲದಲ್ಲಿ ಬಹಳಷ್ಟು ಪರೀಕ್ಷೆಗಳು, ನೋಂದಣಿ ಪ್ರಕ್ರಿಯೆ  ಗಳನ್ನು ನಡೆಸುವುದು ಕೂಡ ಸರಿಯಲ್ಲ. ಪ್ರಮುಖವಾಗಿ ಯಾವುದಾದರೂ ಒಂದು ಪ್ರವೇಶ ಪ್ರಕ್ರಿಯೆ ನಡೆಯುವಾಗ ಬೇರೆಯವುಗಳಿಗೆ ಮತ್ತೂಂದು ಸಮಯ ನೀಡುವುದು ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next