Advertisement

ಉಡುಪಿ : ರಂಗಕರ್ಮಿ ಪ್ರೊ. ಮೇಟಿ ಮುದಿಯಪ್ಪ ಇನ್ನಿಲ್ಲ

01:02 PM Mar 18, 2022 | Team Udayavani |

ಉಡುಪಿ : ಉಡುಪಿ : ರಂಗಕರ್ಮಿ, ಪರಿಸರ ಪ್ರೇಮಿ ಪ್ರೊ.ಮೇಟಿ ಮುದಿಯಪ್ಪ ಅವರು ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.

Advertisement

ನಿವೃತ್ತ ಪ್ರಾಂಶುಪಾಲರಾಗಿದ್ದ ಇವರು, ಲೇಖಕರಾಗಿ, ಸಂಘಟಕರಾಗಿ ಹಲವಾರು ಪ್ರಶಸ್ತಿ, ಪುರಸ್ಕಾರ, ಗೌರವಗಳಿಗೆ ಪಾತ್ರರಾಗಿದ್ದರು.

ತನ್ನೂರಿನ ಹಲವಾರು ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಅಕ್ಷರಶಃ ತಂದೆಯಂತೆ ಜವಾಬ್ದಾರಿಯನ್ನು ಹೊತ್ತುಕೊಂಡು ಅದೆಷ್ಟೋ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಸಂತೃಪ್ತಿಯನ್ನು ಕಂಡುಕೊಂಡಿದ್ದರು.

ರಂಗಭೂಮಿ (ರಿ.) ಉಡುಪಿ ಸಂಸ್ಥೆಯಲ್ಲಿ ಸುಮಾರು 30ಕ್ಕೂ ಮಿಕ್ಕ ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದ ಮೇಟಿಯವರು, ಪ್ರಸ್ತುತ ಸಂಸ್ಥೆಯ ಜೊತೆ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೆ ಉಡುಪಿ ರಥಬೀದಿ ಗೆಳೆಯರು, ಯಕ್ಷಗಾನ ಕಲಾರಂಗ, ಲಯನ್ಸ್ ಸೇರಿದಂತೆ ಹಲವಾರು ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.

ಪಾರ್ಥಿವ ಶರೀರದ ಅಂತ್ಯ ಸಂಸ್ಕಾರವು ಗಂಗಾವತಿಯ ಬಳಿಯ ಮೇಟಿಯವರ ಊರಿನಲ್ಲಿ ಇಂದು ನಡೆಯಲಿರುವುದು, ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ : ಬಾಂಗ್ಲಾದೇಶ: ಹೋಳಿ ಸಂಭ್ರಮದ ನಡುವೆ ರಾಧಾಕಾಂತ ದೇವಸ್ಥಾನ ಧ್ವಂಸ, ಲೂಟಿ

Advertisement

Udayavani is now on Telegram. Click here to join our channel and stay updated with the latest news.

Next