Advertisement

ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತವೆ : ಸಿಎಂ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ

11:08 AM Dec 20, 2021 | Team Udayavani |

ಬೆಳಗಾವಿ : ಶಿಗ್ಗಾವ್ ನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾಡಿದ ಭಾವನಾತ್ಮಕ ಭಾಷಣಕ್ಕೆ ಬಿಜೆಪಿ ಹಿರಿಯ ನಾಯಕ, ಶಾಸಕ ಬಸನಗೌಡ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು,ಬದಲಾವಣೆ ಅನ್ನುವುದುದು ಸಹಜ ಎಂದಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ”ಸಿಎಂ ಅವರು ಆಡಿದ ಮಾತು ಅದು ಸಹಜವಾಗಿ ಬಂದದ್ದು, ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ನಾವು ಹೇಳಿದ ಭವಿಷ್ಯ ಸುಳ್ಳಾಗಿಲ್ಲ,ಅಧಿಕಾರ ಶಾಶ್ವತ ಅಲ್ಲ ಅಂತ ಅವರು ಹೇಳಿದ್ದಾರೆ” ಎಂದರು.

‘ಯತ್ನಾಳ್ ಸಿಎಂ ಆಗುತ್ತಾರಾ’ ಎಂಬ ಪ್ರಶ್ನೆಗೆ ಉತ್ತರಿಸಿ, ”ಪಕ್ಷ ಕೊಟ್ಟು ಸಿಎಂ ಮಾಡಿದರೆ ನಾನು ತೋರಿಸುತ್ತೇನೆ, ಕೆಲಸಕ್ಕೆ ಬಾರದವರನ್ನ ಮಾಡಿದರೆ ಮುಗಿದೋಯ್ತು, ಪ್ರಮಾಣಿಕ,ನಿರ್ಣಯ ತೆಗೆದುಕೊಳ್ಳವವರಾಗಬೇಕು. ಬಾಲಂಗೋಚಿಗಳಿಗೆ ಕೊಟ್ಟರೆ ಕಷ್ಟ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next