Advertisement

ಪರಿಸರ ನಾಶದಿಂದ ಸಮಸ್ಯೆ ಹೆಚ್ಚಳ

03:17 PM Jun 29, 2020 | Suhan S |

ರಾಣಿಬೆನ್ನೂರ: ಮನುಷ್ಯನ ಸ್ವಾರ್ಥ ಬದುಕಿನ ಪರಿಣಾಮವಾಗಿ ಪರಿಸರ ವಿನಾಶದಿಂದ ಅನೇಕ ಸಮಸ್ಯೆ ಎದುರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಪರಿಸರ ಸಂರಕ್ಷಿಸುವ ಸಂಕಲ್ಪ ಹೊಂದಬೇಕಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

Advertisement

ನಗರದ 8ನೇ ವಾರ್ಡ್‌ನಲ್ಲಿರುವ ಭಂಗಿ ರಸ್ತೆಯಲ್ಲಿ ವನಮಹೋತ್ಸವದ ಅಂಗವಾಗಿ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಸುಜಿತ ಜಂಬಗಿ, ಮಂಜಯ್ಯ ಚಾವಡಿ, ಬಸವರಾಜ ಪಾಟೀಲ, ಪರಮೇಶಪ್ಪ ಗೂಳಣ್ಣನವರ, ಪವನಕುಮಾರ ಮಲ್ಲಾಡದ, ಜಗದೀಶ್‌ ಕಲ್ಯಾಣಿ, ಬಸವರಾಜ ಹುಲ್ಲತ್ತಿ, ಪೌರಾಯುಕ್ತ ಡಾ| ಎನ್‌.ಮಹಾಂತೇಶ್‌, ನಗರಸಭಾ ಸದಸ್ಯರಾದ ನಾಗರಾಜ ಅಡ್ಮನಿ, ಮಲ್ಲಿಕಾರ್ಜುನ ಅಂಗಡಿ, ಬಿಜೆಪಿ ಮುಖಂಡ ಜಿ.ಜಿ. ಹೊಟ್ಟಿಗೌಡ್ರ, ಪೃಥ್ವಿರಾಜ್‌ ಜೈನ್‌, ಸೋಹನ್‌ ಲಾಲ್‌ ಜೈನ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next