Advertisement

ಹಿಡಿದ ಕೆಲಸ ಕೈಗೂಡಲು ಗ್ರಹ ಬಿಡುವುದೇ?

03:55 AM Apr 01, 2017 | |

ನಾವು ಮಾಡುವ ಕೆಲಸ, ವಹಿವಾಟು, ಕಸುಬು, ಉದ್ಯೋಗಗಳೆಲ್ಲ ಗ್ರಹಗಳ ಮೇಲಿಂದಲೇ ಅದೃಷ್ಟವನ್ನು ತರುವಂಥದಾಗುತ್ತವೆ.

Advertisement

ಜೀವನದಲ್ಲಿ ಸಂಪಾದನೆಗಾಗಿ ಒಂದು ಕಾಯಕವನ್ನ ಮಾಡಬೇಕು. ಉದ್ಯೋಗವೇ ಪುರುಷನ ನಿಜವಾದ ಲಕ್ಷಣ ಎಂಬ ಹಳೆಯ ನಾಣ್ನುಡಿಯೇ ಇದೆ. ಸಂಸ್ಕೃತದಲ್ಲಿದನ್ನು ಉದ್ಯೋಗಂ ಪುರುಷ ಲಕ್ಷಣಂ ಎಂದು ಉಪಯೋಗಿಸಿದ್ದಾರೆ. ಈಗ ಜೀವನದ ಎಲ್ಲಾ ರಂಗದಲ್ಲಿ ಮಹಿಳೆಯೂ ಪುರುಷನ ಹೆಗಲೆಣೆಯಾಗಿ ನಿಂತಿದ್ದಾಳೆ. ಅವಳಿಗೂ ಉದ್ಯೋಗ ಪ್ರಧಾನವಾದುದೇ ಆಗಿದೆ. ಕಾಂಚಾಣ ಈಗ ಜಗದ ಸ್ವಾಭಾವಿಕ ಭಾಷೆಯಾಗಿದೆ. ಹೆಣ್ಣು ಹಾಗೂ ಗಂಡು ಇಬ್ಬರೂ ದುಡಿಯುತ್ತಾರೆ. ಇಲ್ಲೀಗ ಪುರುಷನೇ ಸಂಸಾರದ ನೊಗವನ್ನ ಹೊರುವ ಏಕಮಾತ್ರ ಶಕ್ತಿಯಾಗುಳಿದಿಲ್ಲ.  ಉದ್ಯೋಗ ಎಂಬುದು ಈಗ ಎಲ್ಲರ ಸೊತ್ತು.
ಆದರೂ ಎಲ್ಲರೂ ತಂತಮ್ಮ ಉದ್ಯೋಗದಲ್ಲಿ ತೃಪ್ತರು ಎಂದು ಹೇಳಲಾಗದು. ಹಾಕಿದ ಬಂಡವಾಳ ನಿರ್ದಿಷ್ಟ ಗುರಿ ಇರದೇ ನಷ್ಟವನ್ನು ತರಬಲ್ಲದು. ನಿರ್ದಿಷ್ಟ ಗುರಿ ಇದ್ದೂ ನಷ್ಟವನ್ನೇ ತರಬಲ್ಲದು. ವಿವೇಚನೆಗಳೇ ಇರದೆ ತಂದ ಸಾಲದ ಗಂಟು ಶೂಲವಾಗಿ ಇಡೀ ಜೀವನ ಒಂದು ನೋವಿನ ಸಂಗ್ರಾಮವಾಗುವ ವಿಚಾರ ಹರಳುಗಟ್ಟುತ್ತದೆ. ಯಾವ ಕಾರಣಕ್ಕಾಗಿ ಸಾಲವನ್ನು ತರುತ್ತಾರೋ ಅದು ಬೇರೆಯ ಕೆಲಸಗಳಿಗೆ ವ್ಯಯಗೊಂಡು ಅಸಲೀ ಕಸುಬು ನಷ್ಟಕ್ಕೆ ಮುಖ ಮಾಡುವ ದಾರುಣತೆ  ಒದಗುತ್ತದೆ. 
ಹೀಗಾಗಿ ಒಬ್ಬನ ಅಥವಾ ಒಬ್ಬಳ ಜಾತಕದಲ್ಲಿ ಕರ್ಮ ಸ್ಥಾನದ ಅಧಿಪತ್ಯ ಹೊತ್ತ ಗ್ರಹ, ಕರ್ಮ ಸ್ಥಾನದಲ್ಲಿ ಸ್ಥಿತಗೊಂಡ ಗ್ರಹ, ಈ ಗ್ರಹಗಳ ಮೇಲೆ ಆವಾಹನೆಗೊಂಡ ದೃಷ್ಟಿ (ಇತರ ಗ್ರಹಗಳನ್ನು ಅವಲಂಬಿಸಿ ಇದರ ನಿರ್ಣಯವಾಗಬೇಕಾಗುತ್ತದೆ.)ಇತ್ಯಾದಿ, ಇತ್ಯಾದಿ ಅವರವರ ಕೆಲಸದಲ್ಲಿ ಸಫ‌ಲತೆ ಯನ್ನು ತರಲು ಕಾರಣವಾಗುತ್ತವೆ. ಇವುಗಳಲ್ಲಿ ಅಸಮತೋಲನ ತುಂಬಿದಲ್ಲಿ ಉತ್ತಮ ಗಳಿಕೆ, ಉತ್ತಮ ಸಂಬಳ ಕೆಲಸದಲ್ಲಿ ನೆಮ್ಮದಿ ನಾಶವಾಗುತ್ತದೆ. ಕರ್ಮಸ್ಥಾನದ ಗಟ್ಟಿತನ ಸಂಪತ್ತಿಗೆ ಕಾರಣವಾಗುತ್ತದೆ. 
ಕರ್ಮಸ್ಥಾನದ ಅಗಾಧ ಸಿದ್ಧಿ ಮತ್ತು ಬಿಲ್‌ಗೆಟ್ಸ್‌
ಬಿಲ್‌ಗೇಟ್ಸ್‌ ಹೆಸರು ಯಾರು ತಾನೇ ಕೇಳಿಲ್ಲ? ಮೈಕ್ರೋ ಸಾಫ್ಟ್ ಕಂಪನಿ ಹುಟ್ಟು ಹಾಕಿದ ಬಿಲ್‌ಗೇಟ್ಸ್‌ ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಪ್ರಥಮ ಸಾಲಿನ ಹೆಸರಾದ. ದಾನ, ಧರ್ಮ, ಸದ್‌ಬಳಕೆಗಳಿಗಾಗಿನ ಧನ ವಿನಿಯೋಗಗಳೊಂದಿಗೆ ನವಯುಗದ ಬಹು ಸಾರ್ಥಕತೆಯೊಂದಿಗಿನ ದೊಡ್ಡ ಹೆಸರು ಬಿಲ್‌ಗೇಟ್ಸ್‌ನದು. ಇವರ ಜಾತಕದಲ್ಲಿ ಬಲವಾದ ಚಂದ್ರ ಬಲಯುತರಾದ ಲಾಭದ ಸಂಚಾಲನೆ ಉಂಟು ಮಾಡುವ ಕುಜ ಹಾಗೂ ಬುಧರಿಂದ ಭರ್ಜರಿಯಾಗಿ ಮಿಂಚಿದ್ದಾನೆ. 
ಕರ್ಮಸ್ಥಾನಧಿಪ ಗುರು ಧನ ರಾಶಿಯಲ್ಲಿ ಬಲಾಡ್ಯನಾಗಿ ಲಾಭವನ್ನು ಅಗಾಧವಾಗಿ ಚಿಮ್ಮಿಸುವುದಕ್ಕೆ ಸಂಕಲ್ಪ ಮಾಡಿದ್ದಾನೆ. ಕರ್ಮಸ್ಥಾನವಾದ ಮೇಷವನ್ನು ದೃಷ್ಟಿಸಿ, ಅಪಾರವಾದ ಧನ ಸಂಚಯ, ಕೈ ಹಾಕಿದ ಕೆಲಸಗಳಲ್ಲಿ ಅದು³ತವಾದ ಗೆಲುವಿಗೆ ಕಾರಣನಾಗಿದ್ದಾನೆ. ಕರ್ಮ ಸ್ಥಾನದ ಅಧಿಪತಿ ಹಣದ ಥೈಲಿಯನ್ನ ಬಿಡುವಿರದಂತೆ ಹೊತ್ತು ತರುವ ಕಾಯಕಕ್ಕೆ ಮುಂದಾಗಿ ಧೈರ್ಯಸ್ಥಾನದಲ್ಲಿ ಕುಳಿತು ಭಾಗ್ಯದಲ್ಲಿನ ಚಂದ್ರನ ಮೂಲಕ ಶಶಿ ಮಂಗಳ ಯೋಗಕ್ಕೆ ಕಾರಣನಾಗಿದ್ದಾನೆ. ಸತತ ಪರಿಶ್ರಮ, ಧೈರ್ಯ, ಸಾಹಸಗಳಿಗೆ ಬಿಲ್‌ಗೇಟ್ಸ್‌ ಮುಂದಾಗುವಂತೆ ಉಚ್ಚ ಬುಧ ಗ್ರಹವನ್ನು ಪರಿಣಾಮದ ದೃಷ್ಟಿಯಿಂದ ಸಿದ್ಧಿಗೆ ಕಾರಣವಾಗುವಂತೆ ಭಾಗ್ಯ ಹಾಗೂ ಧನ ಸಮೃದ್ಧಿಗೆ ಕಾರಣನಾಗಿದ್ದಾನೆ. ಬಿಲ್‌ಗೇಟ್ಸ್‌ ವಹಿವಾಟುಗಳೆಲ್ಲ ಲಕ್ಷಿ$¾à ಕಟಾಕ್ಷದಲ್ಲಿ ಗೆಲ್ಲಲು ಕಾರಣವಾಗುವ ನೀಚ ಭಂಗ ರಾಜಯೋಗ, ರಾಹು ಸಿದ್ಧಿ, ಕರ್ಮ ಸ್ಥಾನದ ಅತಿ ಸುರಕ್ಷಿತ ಗಟ್ಟಿತನ ಜಾತಕದ ಪ್ರಧಾನ ಅಂಶಗಳಾಗಿವೆ. ಒಟ್ಟಿನಲ್ಲಿ ಸಂಪತ್ತನ್ನ ವಿಶೇಷವಾಗಿ ಶೇಖರಿಸುವ ತಾಕತ್ತು ಬಿಲ್‌ಗೇಟ್ಸ್‌ ಜಾತಕದ ಸಕಾರತ್ಮಕ ಅಂಶ. ಚಂದ್ರ ವರ್ಚಸ್ಸನ್ನು ವಿಸ್ತರಿಸುವ ವ್ಯಕ್ತಿತ್ವವನ್ನು ಅನುಗ್ರಹಿಸಿದ್ದಾನೆ. ಜೀವನದಲ್ಲಿ ಗೆಲ್ಲಲು ಇನ್ನೇನು ಬೇಕು? ಇದು ಅದೃಷ್ಟದ ಆಟ, ವೈಖರಿ ಅಷ್ಟೆ. 
ಗೆದ್ದರೂ ಆರ್ಥಿಕವಾಗಿ, ಸೋತ ಕ್ರಿಕೆಟಿಗ ಮತ್ತು ಶನಿಗ್ರಹ
ಈ ಕ್ರಿಕೆಟಿಗ ಯಾರು ಎಂಬುದರ ಪ್ರಸ್ತಾಪ ಬೇಡ. ಹೆಸರು ಹೇಳುವುದು ಸೂಕ್ತವಾಗದು. ಕ್ರಿಕೆಟ್‌ ಆಟದ ಆಯ್ಕೆ ಸರಿಯಾಗಿಯೇ ಇತ್ತು. ಆದರೆ ಈ ಜಗದ್ವಿಖ್ಯಾತ ಕ್ರಿಕೆಟಿಗ ಬರಿಗೈಯ ಕಾಸಿರದ ದೊರೆ ಈಗ. ಈತ ಬೌಲ್‌ ಮಾಡಲು ಹೊರಟರೆ ಪ್ರಪಂಚದ ಎಂಥದೇ ಪ್ರಚಂಡ ದಾಂಡಿಗನಾದರೂ ಒಮ್ಮೆ ಗುಂಡಿಗೆ ಹಿಡಿದು ನೋಡಿಕೊಳ್ಳಬೇಕು. ಸುಳಿಯಾಗಿ ಪುಟಿದು ಬರುವ ಚೆಂಡು ಪ್ರಕಾಂಡ ಬ್ಯಾಟ್ಸ್‌ಮನ್‌ನ ರಕ್ಷಣಾ ವ್ಯೂಹವನ್ನ ಭೇದಿಸಿ ಸ್ಟಂಪ್‌ಗ್ಳನ್ನ ಬೇರು ಸಹಿತ ಕಿತ್ತು ಬೀಳಿಸುತ್ತಿತ್ತು. ನಿರ್ದಿಷ್ಟ ಲಯ, ತಿರುವು, ಎಸೆತದ ಉದ್ದ ದಕ್ಕಿದಾಗ ಈ ಬೌಲರ್‌ನ ಎಸೆತಗಳೆದುರು ನೂರು ರನ್‌ಗಳನ್ನು ಎದುರಾಳಿ ತಂಡ ಮಾಡುವುದೂ ದುಸ್ತರವಾಗುತ್ತಿತ್ತು. 
ಈ ಕ್ರಿಕೆಟ್ಟಿಗನ ಜಾತಕದ ಕರ್ಮ ಸ್ಥಾನದ ದೊರೆ ಬುಧ, ಕರ್ಮ ಸ್ಥಾನ ಸ್ಥಿತ ಗುರು ಬಲು ಬಲಾಡ್ಯರು. ಕ್ರಿಕೆಟ್‌ ಅಂಗಳಕ್ಕೆ ಯುಕ್ತವಾಗೇ ಎಳೆದು ತಂದವು ಈ ಗ್ರಹಗಳು. ಆದರೆ ಧನ ಸ್ಥಾನದ ಸವಕಳಿ,ಧನಾಧಿಪತಿಯ ರುಗ್ಣಸ್ಥಿತಿ, ಧನ ಸ್ಥಾನ ಶನಿ ಮಹಾತ್ಮನ ಕ್ರೂರ ದೃಷ್ಟಿ, ಲಾಭದಲ್ಲಿದ್ದರೂ ಕುಜನ ದೃಷ್ಟಿಯಿಂದ ನರಳಿ ಲಾಭಕ್ಕೆ ಭಂಗ ತಂದ ಶನಿಗ್ರಹ ಈ ಕ್ರಿಕೆಟಿಗನ ವಿಚಾರದಲ್ಲಿ ಲಕ್ಷಿ$¾àಕಟಾಕ್ಷವನ್ನು ಒದಗಿಸಲಿಲ್ಲ. ಕ್ಷೀಣ ಚಂದ್ರನ ದುಃಸ್ಥಾನ ಪೀಡಿತ ಸ್ಥಿತಿ ಇವರ ಮನೋ ವೇದಿಕೆಯನ್ನ ನಿರಂತರವಾಗಿ ಅಸ್ಥಿರತೆಯಲ್ಲಿ ಹೊಯ್ದಾಡಿಸುತ್ತ ಅಂತರಂಗದಲ್ಲಿ ಅಶಾಂತಿಯನ್ನೇ ತುಂಬಿದೆ. ಕ್ರಿಕೆಟಿಗನಾಗಿ ಅದೃಷ್ಟ. ಆದರೂ ಬರಿಗೈ ದೊರೆ ಆದದ್ದು ಇವರು ಪಡೆದು ಬಂದ ಅದೃಷ್ಟ. ಒಟ್ಟಿನಲ್ಲಿ ಗ್ರಹಗಳ ಆಟ ವಿಚಿತ್ರದ್ದಾಗಿದೆ. 

ನಾವು ಮಾಡುವ ಕೆಲಸ, ವಹಿವಾಟು, ಕಸುಬು, ಉದ್ಯೋಗಗಳೆಲ್ಲ ಗ್ರಹಗಳ ಮೇಲಿಂದಲೇ ಅದೃಷ್ಟವನ್ನು ತರುವಂಥದಾಗುತ್ತವೆ. ಬಿಲ್‌ಗೇಟ್ಸ್‌ ಯಾವುದನ್ನೋ ಶುರು ಹಚ್ಚಿಗೆದ್ದು ಬಿಟ್ಟರು ಎಂದಾಕ್ಷಣ, ಮತ್ತೂಬ್ಬ ಶೆಲ್‌ಗೇಟ್ಸ್‌ ಇದೇ ಕೆಲಸದಲ್ಲಿ ಗೆಲುವು ಸಂಪಾದಿಸಬಲ್ಲ ಎಂದು ಅನ್ನಲಾಗದು. ಇದೀಗ ನಮ್ಮ ರಾಜ್ಯದಲ್ಲಿ ಚುನಾವಣೆಯ ಕಾಲ. ಎಲ್ಲರನ್ನೂ ವಿಜಯ ಲಕ್ಷಿ$¾à ಮಾಲೆ ತೊಡಿಸಿ ವಿಜೃಂಭಿಸಲಾರಳು. ರಾಜಕೀಯ, ಗೆಲ್ಲುವ ಹುರಿಯಾಳುಗಳ ಕರ್ಮ ಸ್ಥಾನದ ಬಲದಿಂದ ಪ್ರಚಂಡ ಸಿದ್ಧಿಯನ್ನು ಒಬ್ಬನಿಗೆ ತರಬಲ್ಲದು. ಗೆಲ್ಲುವ, ಸೋಲುವ ಚಿತ್ರಗಳನ್ನು ಗಮನಿಸಿದರೆ ಕಾಲದ ಚಕ್ರ ಯಾರನ್ನೋ ಮೇಲಮೇಲಕ್ಕೆ ಎತ್ತುತ್ತದೆ. ಇನ್ಯಾರನ್ನೋ ಮೇಲೆತ್ತಿ ಅಧಃಪತನಕ್ಕೆ ತಳ್ಳುತ್ತದೆ. 

ಒಬ್ಬ ವ್ಯಕ್ತಿ ತನ್ನ ಮಿತಿಯನ್ನು ಅರಿತು ಹೆಜ್ಜೆ ಇಟ್ಟರೇ ಚೆನ್ನ. ಒಬ್ಬ ಸಮರ್ಥ ಪೊಲೀಸ್‌ ಅಧಿಕಾರಿಯಾಗಿ ಮಿಂಚಬಲ್ಲ. ಮಗದೊಬ್ಬ ವರನಟನಾಗಬಲ್ಲ. ಸಮರ್ಥನಿರ್ದೇಶಕ ಕೈಚೆಲ್ಲಿ ಕೇರ್‌ ಆಫ್ ಫ‌ುಟ್‌ಪಾತ್‌ ಆಗಬಲ್ಲ. ನಿರಂತರವಾದ ಬಲಾಡ್ಯತೆಯೊಂದಿಗೆ ಜಗತ್ತನ್ನೇ ಅಲ್ಲಾಡಿಸಬಲ್ಲ ಚಕ್ರವರ್ತಿಯಾಗಬಲ್ಲ. ಗೆಳೆಯನಿಂದಲೇ ವಂಚನೆಗೆ ಸಿಕ್ಕಿ ಸಾಯುವ ಸ್ಥಿತಿ ಬರಬಹುದು.

ಅನಂತಶಾಸ್ತ್ರಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next