Advertisement
ಮುಖ್ಯ ಅತಿಥಿಯಾಗಿದ್ದ ತೀರ್ಪು ಗಾರರಾದ ನೃತ್ಯಗುರು ವಿದುಷಿ ಲಕ್ಷ್ಮೀ ಗುರುರಾಜ್ ಅವರು ಮಾತನಾಡಿ, “ಸ್ಪರ್ಧೆಗೆ ಬಂದಿದ್ದ 3,500ಕ್ಕೂ ಅಧಿಕ ಫೋಟೋಗಳಲ್ಲಿ ಆಯ್ಕೆ ಮಾಡು ವುದೇ ದೊಡ್ಡ ಸವಾಲಾಗಿತ್ತು. ಸಾಂಪ್ರದಾಯಿಕ ದಿರಿಸು, ಸನ್ನಿವೇಶ, ಸೃಜನಶೀಲತೆಗೆ ಹೆಚ್ಚು ಆದ್ಯತೆ ನೀಡಿ ಆಯ್ಕೆ ಮಾಡಿದ್ದೆವು. ಅತ್ಯಂತ ಕ್ರಮಬದ್ಧವಾಗಿ, ನಿಷ್ಪಕ್ಷವಾಗಿ ಆಯ್ಕೆ ನಡೆದಿದೆ. ಉದಯವಾಣಿಯ ಸ್ಪರ್ಧೆಗೆ ಓದುಗರ ಪ್ರತಿಕ್ರಿಯೆ ಅತ್ಯದ್ಭುತವಾಗಿತ್ತು’ ಎಂದು ಹೇಳಿದರು.
ಎಂಎಂಎನ್ಎಲ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್ ಕುಮಾರ್ ಅವರು ಮಾತನಾಡಿ, “ಉದಯವಾಣಿ ತನ್ನ ಓದುಗರೊಂದಿಗಿನ ಸಂವಹನ, ಸಂವಾದವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದಕ್ಕಾಗಿ ರೇಷ್ಮೆ ವಿದ್ ದೀಪಾವಳಿ, ವರ್ಲ್ಡ್ಕಪ್ ಧಮಾಕಾ ಮೊದಲಾದವುಗಳನ್ನು ಆಯೋಜಿಸುತ್ತಾ ಬಂದಿದೆ. ಅದರ ಮುಂದುವರಿದ ಭಾಗವಾಗಿ ಯಶೋದಾ ಕೃಷ್ಣ ಸ್ಪರ್ಧೆ ಆಯೋಜಿಸಿದೆ. ಇಂಥ ಹಲವು ಓದುಗಸ್ನೇಹಿ ಉಪಕ್ರಮಗಳನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸುತ್ತೇವೆ’ ಎಂದರು. ಮಾ| ಪ್ರಥಮ್ ಅವರು ಜಾದೂ ಮೂಲಕ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಮೆರುಗು ತುಂಬಿದರು. ಸಂಪಾದಕ ಅರವಿಂದ ನಾವಡ ಸ್ವಾಗತಿಸಿದರು. ಉಡುಪಿ ಜಾಹೀರಾತು ವಿಭಾಗದ ಮುಖ್ಯಸ್ಥ ಕೆ. ರಾಧಾಕೃಷ್ಣ ಭಟ್ ವಂದಿಸಿದರು. ಸುಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
Related Articles
ಸ್ವಾತಂತ್ರ್ಯೋತ್ಸವ ಪ್ರಯುಕ್ತ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೂ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನ ಪಡೆದ ಬಂಟ್ವಾಳದ ಎಸ್ವಿಎಸ್ ಆಂಗ್ಲಮಾಧ್ಯಮ ಶಾಲೆಯ ಶ್ರವಣ ರಾಮಕುಂಜರ ಬದಲಾಗಿ ಅವರ ತಾಯಿ ಹಿರಣ್ಮಯಿ ಬಹುಮಾನ ಸ್ವೀಕರಿಸಿದರು. ದ್ವಿತೀಯ ಬಹುಮಾನ ಪಡೆದ ಉಡುಪಿಯ ವಳಕಾಡು ಸರಕಾರಿ ಪ್ರೌಢ ಶಾಲೆಯ ಅಲ್ಶೀಫಾ ಬಾನು ಅವರಿಗೂ ಬಹುಮಾನ ನೀಡಲಾಯಿತು.
Advertisement
ಶ್ರೀಕೃಷ್ಣನಂತೆ ಸವಾಲು ಎದುರಿಸೋಣಯಶೋದಾ ಕೃಷ್ಣ ಸ್ಪರ್ಧೆ ನಮ್ಮ ಮನೆಯಲ್ಲಿಯೂ ಸಂಭ್ರಮ ಮೂಡಿಸಿದೆ. ಶ್ರೀಕೃಷ್ಣ ದೇವರು ಹುಟ್ಟುವಾಗಲೇ ಕಷ್ಟಗಳನ್ನು ಎದುರಿಸುತ್ತಾ ಬೆಳೆದವರು. ಅವರನ್ನು ಆದರ್ಶವಾಗಿಟ್ಟುಕೊಂಡು, ಪ್ರಾರ್ಥಿಸಿ ನಾವು ಕೂಡ ನಮ್ಮ ಎದುರಿರುವ ಸವಾಲುಗಳನ್ನು ಧೈರ್ಯವಾಗಿ ಎದುರಿಸಬೇಕು.
– ಸುಶ್ಮಿತಾ ಜಿ. ಹೆಗ್ಡೆ, ಪ್ರಥಮ ಬಹುಮಾನ ವಿಜೇತರು