Advertisement

ಭೀಮನ ನಿರೀಕ್ಷೆಯಲ್ಲಿ ಪ್ರಿಯಾಂಕಾ

11:54 AM Sep 19, 2018 | |

“ಗಣಪ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಮಲೆನಾಡ ಹುಡುಗಿ ಪ್ರಿಯಾಂಕಾ ತಿಮ್ಮೇಶ್‌ ಸದ್ಯ “ಭೀಮ’ನ ನಿರೀಕ್ಷೆಯಲ್ಲಿದ್ದಾರೆ. ಈ ಸಲ ಭೀಮ ಕೈ ಹಿಡಿಯುತ್ತಾನೆಂಬ ಅಚಲವಾದ ನಂಬಿಕೆ ಕೂಡಾ ಪ್ರಿಯಾಂಕಾ ಅವರಿಗಿದೆ. ಎಲ್ಲಿಯ ಭೀಮ, ಯಾವ ಪ್ರಿಯಾಂಕಾ ಎಂದು ನೀವು ಕೇಳಬಹುದು. “ಭೀಮಸೇನ ನಳಮಹಾರಾಜ’ ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ.

Advertisement

ಈಗಾಗಲೇ ಚಿತ್ರೀಕರಣ ಮುಗಿಸಿರುವ ಆ ಚಿತ್ರ ಬಿಡುಗಡೆಯ ಹಂತದಲ್ಲಿದೆ. ಈ ಚಿತ್ರದ ಇಬ್ಬರು ನಾಯಕಿಯರಲ್ಲಿ ಪ್ರಿಯಾಂಕಾ ಕೂಡಾ ಒಬ್ಬರು. ಇಲ್ಲಿ ಪ್ರಿಯಾಂಕಾ, ಸಾರಾ ಎಂಬ ಕ್ರಿಶ್ಚಿಯನ್‌ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಒಗರು ರುಚಿಯನ್ನು ಪ್ರತಿನಿಧಿಸುತ್ತಾರಂತೆ. “ಈ ಸಿನಿಮಾ ಮೇಲೆ ನನಗೆ ಸಾಕಷ್ಟು ನಿರೀಕ್ಷೆ ಇದೆ. ನಾನು ಈ ಚಿತ್ರಕ್ಕೆ ಆಯ್ಕೆಯಾಗಿದ್ದು ಕೂಡಾ ಅನಿರೀಕ್ಷಿತವಾಗಿ.

ಅದೊಂದು ದಿನ ನಿರ್ಮಾಪಕ ಪುಷ್ಕರ್‌ ಅವರ ಕಚೇರಿಗೆ ಹೋಗಿದ್ದೆ. ಅಲ್ಲಿದ್ದ ನಿರ್ದೇಶಕ ಕಾರ್ತಿಕ್‌ ಅವರು ನನ್ನನ್ನು ನೋಡಿ, “ಈ ಪಾತ್ರಕ್ಕೆ ತುಂಬಾ ಚೆನ್ನಾಗಿ ಹೊಂದಿಕೆಯಾಗುತ್ತಾರೆ’ ಎಂದು ನನ್ನನ್ನು ಆಯ್ಕೆ ಮಾಡಿದರು’ ಎಂದು ಚಿತ್ರದ  ಬಗ್ಗೆ ಹೇಳುತ್ತಾರೆ. ಈ ಸಿನಿಮಾ ಮೂಲಕ ಪ್ರಿಯಾಂಕಾಗೆ ಬ್ರೇಕ್‌ ಸಿಗುವ ನಿರೀಕ್ಷೆ ಇದೆ. “ತುಂಬಾ ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿ ಇದೆ.

ನಿರ್ಮಾಣ, ನಿರ್ದೇಶನ ತಂಡ ಎಲ್ಲರೂ ಸಿನಿಮಾ ಅಚ್ಚುಕಟ್ಟಾಗಿ ಮೂಡಿಬರಲು ಶ್ರಮಿಸಿದ್ದಾರೆ’ ಎನ್ನುವುದು ಪ್ರಿಯಾಂಕಾ ಮಾತು. “ಗಣಪ’ ಚಿತ್ರದ ನಂತರ ಪ್ರಿಯಾಂಕಾ ದೊಡ್ಡ ಗ್ಯಾಪ್‌ ತಗೊಂಡಿದ್ದರು. ಯಾವುದೇ ಸಿನಿಮಾದಲ್ಲೂ ಪ್ರಿಯಾಂಕಾ ಸುದ್ದಿಯಾಗಿರಲಿಲ್ಲ. ಹಾಗಾದರೆ ಅವರಿಗೆ ಅವಕಾಶವಿರಲಿಲ್ಲವೇ ಎಂದು ನೀವು ಕೇಳಬಹುದು. “ನಾನು ಸಾಕಷ್ಟು ಕಥೆ ಕೇಳುತ್ತಿದ್ದೆ. ಎಲ್ಲಾ ಓಕೆಯಾಗಿ, ಯಾವುದೋ ಒಂದು ಅಂಶದಲ್ಲಿ ತಪ್ಪುತ್ತಿತ್ತು.

ಕೆಲವರು ಸಿನಿಮಾ ಮುಗಿಯುವವರೆಗೆ ಬೇರೆ ಸಿನಿಮಾ ಒಪ್ಪಿಕೊಳ್ಳಬಾರದು ಎನ್ನುತ್ತಿದ್ದರು. ಅದು ಹೇಗೆ ಸಾಧ್ಯ ಹೇಳಿ…. ಈ ತರಹದ ಸಮಸ್ಯೆಗಳಿಂದ ಸಿನಿಮಾ ತಪ್ಪಿತ್ತಿತ್ತು. ಈ ಗ್ಯಾಪ್‌ನಲ್ಲಿ ನಾನು ಚೆನ್ನಾಗಿ ತಮಿಳು ಕಲಿತೆ. ನನಗೆ ತಮಿಳು ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಅದು ಕೂಡಾ ಈಡೇರಿತು’ ಎನ್ನುವುದು ಪ್ರಿಯಾಂಕಾ ಮಾತು. ಪ್ರಿಯಾಂಕಾ ಮಲಯಾಳಂನಲ್ಲೂ ಒಂದು ಸಿನಿಮಾ ಮಾಡಿದ್ದಾರೆ. ನೀವೀನ್‌ ಪೌಲ್‌ ನಾಯಕರಾಗಿರುವ ಬಿಗ್‌ಬಜೆಟ್‌ ಸಿನಿಮಾದಲ್ಲಿ ಪ್ರಿಯಾಂಕಾ, ನೀವೀನ್‌ ಪತ್ನಿಯ ಪಾತ್ರ ಮಾಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next