Advertisement

ಉತ್ತರಪ್ರದೇಶ ಕಾಂಗ್ರೆಸ್ : ಪ್ರಿಯಾಂಕಾಗೆ ಬಂಡಾಯ?

09:36 AM Nov 22, 2019 | Hari Prasad |

ಲಕ್ನೋ: ಉತ್ತರ ಪ್ರದೇಶದಲ್ಲಿ 2022ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪಕ್ಷ ಸಿದ್ಧಗೊಳಿಸುವ ಪ್ರಯತ್ನದಲ್ಲಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಆಯೋಜಿಸಿದ್ದ ಸಭೆಗೆ ಹೆಚ್ಚಿನ ನಾಯಕರು ಗೈರುಹಾಜರಾಗಿದ್ದಾರೆ.

Advertisement

ಹಾಲಿ, ಮಾಜಿ ಶಾಸಕರು ಮತ್ತು ಪಕ್ಷದ ನಾಯಕರು ಸೇರಿ 350 ಮಂದಿಯನ್ನು ಸಭೆಗೆ ಆಹ್ವಾನಿಸಲಾಗಿತ್ತು. ಈ ಪೈಕಿ 40 ಮಂದಿ ಮಾತ್ರ ಆಗಮಿಸಿದ್ದರು. ಉ.ಪ್ರ. ಕಾಂಗ್ರೆಸ್‌ ಸಮಿತಿಯಿಂದ ಹಳೇ ತಲೆಮಾರಿನ ನಾಯಕರಿಗೆ ಅವಕಾಶ ನೀಡದೆ ಇದ್ದದ್ದು ಸೇರಿ ಹಲವಾರು ಕಾರಣಗಳು ನಾಯಕರು ಈ ಹಿಂದೆ ಆಯೋಜಿಸಲಾಗಿದ್ದ ಎರಡು ಸಭೆಗಳಿಗೂ ಗೈರು ಹಾಜರಾಗಲು ಕಾರಣ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next