Advertisement

ದುರ್ಯೋಧನ ಸಿಟ್ಟು –ಸೆಡವಿನಿಂದಲೇ ನಾಶವಾಗಿದ್ದ: ಮೋದಿಗೆ ಪ್ರಿಯಾಂಕಾ ಟಾಂಗ್‌

10:05 AM May 08, 2019 | Team Udayavani |

ಅಂಬಾಲಾ, ಹರಿಯಾಣ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷ ವಾಕ್‌ ದಾಳಿ ನಡೆಸಿದ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಮಹಾಭಾರತದ ದುರ್ಯೋಧನ ತನ್ನ ಸಿಟ್ಟು-ಸೆಡವಿನಿಂದಲೇ ನಾಶವಾಗಿದ್ದ ಎಂದು ಹೇಳಿದ್ದಾರೆ.

Advertisement

ಅಂಬಾಲಾ ಕಾಂಗ್ರೆಸ್‌ ಅಭ್ಯರ್ಥಿ ಕುಮಾರಿ ಸೇಲ್ಜಾ ಪರ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಪ್ರಿಯಾಂಕಾ ಗಾಂಧಿ, ಅವರು ‘ಪ್ರಧಾನಿ ಮೋದಿ ಅವರಿಗೆ ಧೈರ್ಯವಿದ್ದರೆ ಅವರು ಅಭಿವೃದ್ಧಿಯ ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲಿ; ಜನರ ಮನಸ್ಸನ್ನು ಬೇರೆಡೆಗೆ ಹರಿಸುವ ಪ್ರಯತ್ನವನ್ನು ಅವರು ಕೈಬಿಡಲಿ’ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ದಿನದ ಹಿಂದಷ್ಟೇ ತಮ್ಮ ಚುನಾವಣಾ ಭಾಷಣದಲ್ಲಿ ಪ್ರಿಯಾಂಕಾ ಅವರ ದಿವಂಗತ ತಂದೆ, ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಭ್ರಷ್ಟಾಚಾರಿ ನಂಬರ್‌ 1 ಎಂದು ಕರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next