Advertisement

ಭಾರತ “ಎ’ತಂಡ ನಾಯಕತ್ವದ ರೇಸ್‌ನಲ್ಲಿ ಪ್ರಿಯಾಂಕ್‌ ಪಾಂಚಾಲ್‌

10:20 PM Aug 21, 2022 | Team Udayavani |

ಹೊಸದಿಲ್ಲಿ: ಪ್ರವಾಸಿ ನ್ಯೂಜಿಲ್ಯಾಂಡ್‌ “ಎ’ ವಿರುದ್ಧದ ಚತುರ್ದಿನ ಟೆಸ್ಟ್‌ ಸರಣಿಗೆ ಸೋಮವಾರ ಭಾರತ “ಎ’ ತಂಡ ಪ್ರಕಟಗೊಳ್ಳಲಿದೆ. ಗುಜರಾತ್‌ ತಂಡದ ಓಪನರ್‌ ಪ್ರಿಯಾಂಕ್‌ ಪಾಂಚಾಲ್‌ ಈ ತಂಡದ ನಾಯಕನಾಗುವುದು ಬಹುತೇಕ ಖಚಿತಗೊಂಡಿದೆ.

Advertisement

ಪ್ರಿಯಾಂಕ್‌ ಪಾಂಚಾಲ್‌ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಭಾರತ “ಎ’ ತಂಡವನ್ನು ಮುನ್ನಡೆಸಿದ್ದರು. ಅವರನ್ನೇ ಮುಂದುವರಿಸುವುದು ಆಯ್ಕೆ ಸಮಿತಿಯ ಯೋಜನೆಯಾಗಿದ್ದರೆ ಅಚ್ಚರಿ ಇಲ್ಲ. “ಫಾರ್‌ ಎ ಚೇಂಜ್‌’ ಎಂಬಂತೆ ಸೀನಿಯರ್‌ ಆಟಗಾರ ಹನುಮ ವಿಹಾರಿಗೂ ನಾಯಕತ್ವದ ಅವಕಾಶ ಲಭಿಸಬಹುದು.

ಅಭಿಮನ್ಯು ಈಶ್ವರನ್‌, ಬಾಬಾ ಅಪರಾಜಿತ್‌, ಉಪೇಂದ್ರ ಯಾದವ್‌, ಸೌರಭ್‌ ಕುಮಾರ್‌, ಕೆ.ಎಸ್‌. ಭರತ್‌ ಅವರೆಲ್ಲ ಈ ತಂಡದಲ್ಲಿರುವ ಬಗ್ಗೆ ಅನುಮಾನವಿಲ್ಲ. ಹಾಗೆಯೇ ಓಪನರ್‌ ಮಾಯಾಂಕ್‌ ಅಗರ್ವಾಲ್‌ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅನುಕೂಲವಾಗಲೆಂದು ಅವಕಾಶವೊಂದು ಲಭಿಸಬಹುದು. ರಣಜಿ ಹೀರೋ ಸಫ‌ìರಾಜ್‌ ಖಾನ್‌, ಅಂಡರ್‌-19 ವಿಶ್ವಕಪ್‌ ವಿಜೇತ ತಂಡದ ನಾಯಕ ಯಶ್‌ ಧುಲ್‌, ಬೀಸು ಹೊಡೆತಗಾರ ರಜತ್‌ ಪಾಟೀದಾರ್‌ ಆಯ್ಕೆ ಖಚಿತ ಎನ್ನಬಹುದು.

ಸದ್ಯ ರಾಷ್ಟ್ರೀಯ ತಂಡದಲ್ಲಿರುವ ಪ್ರಸಿದ್ಧ್ ಕೃಷ್ಣ, ನವದೀಪ್‌ ಸೈನಿ “ಎ’ ತಂಡಕ್ಕೆ ಮರಳುವ ಸೂಚನೆ ಇದೆ. ಶಿವಂ ಮಾವಿ, ಕಮಲೇಶ್‌ ನಾಗರಕೋಟಿ, ಉಮ್ರಾನ್‌ ಮಲಿಕ್‌, ಆಲ್‌ರೌಂಡರ್‌ ಶಮ್ಸ್‌ ಮುಲಾನಿ, ಶಾಬಾಜ್‌ ಅಹ್ಮದ್‌, ಮುಕೇಶ್‌ ಕುಮಾರ್‌ ಬೌಲಿಂಗ್‌ ವಿಭಾಗಕ್ಕೆ ಸೇರ್ಪಡೆಗೊಳ್ಳುವುದರಲ್ಲಿ ಅನುಮಾನವಿಲ್ಲ.

ಇದೇ ವೇಳೆ ಸೀಮಿತ ಓವರ್‌ಗಳ ಸರಣಿಗಾಗಿ ಭಾರತ “ಎ’ ತಂಡ ಪ್ರಕಟಗೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next