Advertisement

Priyank Kharge; ಬಿಎಸ್‌ವೈ ಪ್ರಕರಣ ಮುಚ್ಚಲು ಮುಡಾ, ವಾಲ್ಮೀಕಿ ಹಗರಣ

11:21 PM Jul 12, 2024 | Team Udayavani |

ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ(B. S. Yediyurappa) ಅವರ ಮೇಲಿನ ಪೋಕ್ಸೋ ಪ್ರಕರಣ ಕೇಸ್‌ ಮುಚ್ಚಿ ಹಾಕಲು ಬಿಜೆಪಿಯವರು ಈ ಮುಡಾ, ವಾಲ್ಮೀಕಿ ನಿಗಮ ಹಗರಣ ವಿಚಾರ ತೆಗೆದಿದ್ದಾರೆ ಅಷ್ಟೇ. ಬೇಟಿ ಬಚಾವೊ, ಬೇಟಿ ಪಡಾವೊ ಬಗ್ಗೆ ಮಾತಾಡುವ ಬಿಜೆಪಿ ಅವರು ಪೋಕ್ಸೋ ಪ್ರಕರಣದ ಬಗ್ಗೆ ಯಾರು ಮಾತನಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ(Priyank Kharge) ಟೀಕಿಸಿದರು.

Advertisement

ಮುಡಾ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ನಮಗೂ ಇವರು ಮಾಡಿರಲಿಲ್ವಾ? ನನಗೆ ನೋಟಿಸ್‌ ಕಳುಹಿಸಿದ್ದರು. ಮುಡಾ ಪ್ರಕರಣ ಯಾರ ಕಾಲದಲ್ಲಿ ಆಗಿದ್ದು, ಯಾರು ಮಾಡಿದ್ದು, ಅದರ ಬಗ್ಗೆ ಏಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಸಚಿವರು ಪ್ರಶ್ನಿಸಿದ್ದಾರೆ.

ಬಿಜೆಪಿಯವರ ಹಗರಣದ ಆಳ, ಆಗಲ ದೊಡ್ಡದಿದೆ. ಪಿಎಸ್‌ಐ ಪ್ರಾಥಮಿಕ ವರದಿ ಬಂದಿದ್ದು ಹಗರಣ ಆಗಿದೆ ಎಂದು ವರದಿ ಬಂದಿದೆ. 40 ಪರ್ಸಂಟೇಜ್‌ ಹಗರಣದ ದಾಖಲೆಗಳು ಸಿಗುತ್ತಿವೆ. ಒಂದೊಂದೇ ಹೊರಗೆ ಬರುತ್ತಿದೆ ಎಂದು ಬಿಜೆಪಿಯನ್ನು ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next