Advertisement

Kadaba ನ್ಯಾಯಾಲಯದಲ್ಲಿ ಖಾಸಗಿ ದೂರು: ಕೊಂಬಾರಿನ ಐವರ ವಿರುದ್ಧ ಪ್ರಕರಣ ದಾಖಲು

08:48 PM May 29, 2024 | Team Udayavani |

ಕಡಬ: ಮನೆಗೆ ಹೋಗುವ ರಸ್ತೆಯನ್ನು ಬಂದ್‌ ಮಾಡಿರುವುದಲ್ಲದೆ, ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿದ ಆರೋಪ ಹೊರಿಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಕೊಂಬಾರು ಗ್ರಾಮದ ಒಡೋಳಿಯ ಐವರ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಓಡೋಳಿ ನಿವಾಸಿ ಶಶಿಧರ ಅವರ ದೂರಿನಂತೆ ಓಡೋಳಿ ನಿವಾಸಿಗಳಾದ ಶಿವಪ್ರಸಾದ್‌, ಸುಶೀಲಾ, ಶೀಲಾವತಿ, ಗಂಗಮ್ಮ, ಮಧುಸೂಧನ ಅವರ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಮಾರ್ಚ್‌ ತಿಂಗಳಲ್ಲಿ ಶಶಿಧರ ಅವರ ಮನೆಗೆ ಹೋಗುವ ರಸ್ತೆಯನ್ನು ಅಗಲ ಕಿರಿದು ಮಾಡಿ ಕಲ್ಲು ಹಾಕಿ ಬಂದ್‌ ಮಾಡಿರುವುದಲ್ಲದೆ ಕಿರುಕುಳ ನೀಡುವ ಉದ್ದೇಶದಿಂದ ಮನೆಗೆ ಬರುವ ರಸ್ತೆಯನ್ನು ವಶಪಡಿಸಿ ಕಾನೂನು ಬಾಹಿರವಾಗಿ ಗುಂಪುಗೂಡಿ ಅಕ್ರಮ ಪ್ರವೇಶ ಮಾಡಿ ಕಲ್ಲನ್ನು ಎಸೆದು, ಕೈಯಿಂದ ತಳ್ಳಿ ದೂಡಿ ಹಾಕಿದ್ದಾರೆ.

ದೊಣ್ಣೆಯಿಂದ ಹೊಡೆದು ಎಡಕಾಲಿಗೆ ಗಾಯವಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್‌ ತಿಂಗಳಲ್ಲಿ ಮಧುಸೂದನ ಅವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ತಡೆಗೋಡೆಯನ್ನು ಧ್ವಂಸ ಮಾಡಿದ್ದಾರೆ ಎನ್ನುವ ಆರೋಪದಲ್ಲಿ ಶಶಿಧರ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ನಡೆದ ಬೆಳವಣಿಗೆಯಲ್ಲಿ ಈ ವಿದ್ಯಮಾನ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next