Advertisement

ಪೃಥ್ವಿ ಶಾಗೆ ಭುಜ ನೋವು; ನ್ಯೂಜಿಲೆಂಡ್‌ ಪ್ರವಾಸಕ್ಕೆ ಅನುಮಾನ

04:28 PM Jan 05, 2020 | keerthan |

ಮುಂಬೈ: ಮತ್ತೆ ಭಾರತ ರಾಷ್ಟ್ರೀಯ ತಂಡಕ್ಕೆ ಮರಳುವ ಉತ್ಸಾಹದಲ್ಲಿದ್ದ ಪೃಥ್ವಿ ಶಾಗೆ ಭಾರೀ ಆಘಾತವಾಗಿದೆ.

Advertisement

ಕರ್ನಾಟಕ ವಿರುದ್ಧ ರಣಜಿ ಪಂದ್ಯದ ವೇಳೆ ಮುಂಬೈ ಪರ ಆಡಿದ್ದ ಅವರು, ಶುಕ್ರವಾರ ಗಾಯಗೊಂಡಿದ್ದಾರೆ. ಕ್ಷೇತ್ರರಕ್ಷಣೆ ವೇಳೆ ಚೆಂಡನ್ನುಎಸೆಯಲು ಹೋಗಿ ಭುಜದ ನೋವಿಗೆ ತುತ್ತಾಗಿದ್ದಾರೆ. ಕೈಯನ್ನು ಮೇಲೆತ್ತಲೂ ಆಗದ ಕಾರಣ, 2ನೇ ದಿನ ಅವರು ಆಡಲು ಇಳಿಯದೇ, ನೇರವಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಗೆ (ಎನ್‌ಸಿಎ) ಬಂದಿದ್ದಾರೆ.

ಇದರಿಂದ ಭಾರತ ಎ ತಂಡದೊಂದಿಗೆ ಜ.10ರಂದು ನ್ಯೂಜಿಲೆಂಡ್‌ ಪ್ರವಾಸಕ್ಕೆ ತೆರಳುವುದು ಅನುಮಾನವಾಗಿದೆ. ಅವರ ಭುಜಕ್ಕೆ ಬಹಳ ಏಟು ಬಿದ್ದಿದೆಯಾ? ಗಾಯದ ತೀವ್ರತೆಯೇನು ಎನ್ನುವುದು ಪತ್ತೆಯಾಗಿಲ್ಲ.

ಉದ್ದೀಪನ ಸೇವಿಸಿದ ಹಿನ್ನೆಲೆಯಲ್ಲಿ ಅವರು 8 ತಿಂಗಳು ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿದ್ದರು. ಮತ್ತೆ ಕ್ರಿಕೆಟ್‌ ಮೈದಾನಕ್ಕೆ ಇಳಿದು ಇನ್ನೂ ಒಂದು ತಿಂಗಳೂ ಆಗಿಲ್ಲ. ಅಷ್ಟರಲ್ಲಿ ಮತ್ತೆ ಗಾಯಗೊಂಡಿದ್ದಾರೆ. ಮೈದಾನಕ್ಕೆ ಮರಳಿದ ಬಳಿಕ ಅದ್ಭುತವಾಗಿ ಬ್ಯಾಟಿಂಗ್‌ ಮಾಡಿದ್ದರು. ಅದು ರಾಷ್ಟ್ರೀಯ ತಂಡಕ್ಕೆ ಕರೆ ಪಡೆಯುವ ಭರವಸೆ ಹುಟ್ಟು ಹಾಕಿತ್ತು. ಅದರ ಅಂಗವಾಗಿಯೇ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next