Advertisement

ಪ್ರವಾಹ ಪೀಡಿತರಿಗೆ ಆಸರೆಯಾಗಲಿ ಆದ್ಯತೆ

01:39 AM Aug 21, 2019 | sudhir |

ಬೆಳ್ತಂಗಡಿ: ಈ ಬಾರಿ ದಕ್ಷಿಣ ಕನ್ನಡ ಮತ್ತು ಉಡುಪಿಯ ಹಲವು ಪ್ರದೇಶಗಳು ಭಾರೀ ಮಳೆ, ನೆರೆ, ಪ್ರವಾಹದಿಂದ ಸಮಸ್ಯೆಗಳನ್ನು ಎದುರಿಸಿವೆ. ಜನತೆ ತಮ್ಮ ಆಸ್ತಿಪಾಸ್ತಿ, ದೈನಂದಿನ ಬದುಕಿಗೆ ಎದುರಾದ ಆಘಾತದಿಂದ ಇನ್ನೂ ಹೊರಬಂದಿಲ್ಲ. ಇಂಥ ಹೊತ್ತಿನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದು, ಉಭಯ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯದ ಉಸ್ತುವಾರಿಯನ್ನೂ ನೀಡಲಾಗಿದೆ. ಹೀಗಾಗಿ ಅವರ ಮೇಲೆ ಎರಡೂ ಜಿಲ್ಲೆಗಳ ಜನ ಅಪಾರ ನಿರೀಕ್ಷೆ ಇರಿಸಿಕೊಂಡಿದ್ದಾರೆ.

Advertisement

ಹೆಚ್ಚು ಹಾನಿಯಾದ ಬೆಳ್ತಂಗಡಿಗೆ ಆಸರೆಯಾಗಬೇಕಿದೆ ಸಚಿವರು
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೊಬ್ಬರೇ ಸಚಿವರಾಗಿ ಕೋಟ ಶ್ರೀನಿವಾಸ ಪೂಜಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನೂತನ ಸಚಿವರ ಕುರಿತು ಬೆಳ್ತಂಗಡಿಯ ಜನತೆ ಹಲವಾರು ನಿರೀಕ್ಷೆಗಳನ್ನಿರಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ 17ಕ್ಕೂ ಅಧಿಕ ಗ್ರಾಮಗಳು ಭೀಕರ ಪ್ರವಾಹಕ್ಕೆ ತುತ್ತಾಗಿ ನೂರಾರು ಕುಟುಂಬಗಳು ಸಂತ್ರಸ್ತರಾಗಿದ್ದಾರೆ. ಅವರ ಜೀವನವನ್ನು ಸಹಜ ಸ್ಥಿತಿಯತ್ತ ತರುವ ಸವಾಲು ಸಚಿವರ ಮುಂದಿದೆ. ಆ. 11ರಂದು ಕೋಟ ಶ್ರೀನಿವಾಸ ಪೂಜಾರಿ ಬೆಳ್ತಂಗಡಿಗೆ ಭೇಟಿ ನೀಡಿ ಗರಿಷ್ಠ ಅನುದಾನ ದೊರಕಿಸಿ ಕೊಡುವ ಭರವಸೆಯನ್ನೂ ನೀಡಿದ್ದಾರೆ.

ಮನೆ, ತೋಟಗಳು ನಾಶವಾಗಿವೆ, ರಸ್ತೆಗಳು, ಸೇತುವೆಗಳು, ಕಿಂಡಿ ಅಣೆಕಟ್ಟು ಗಳು, ವಿದ್ಯುತ್‌ ಸಂಪರ್ಕ ಮೊದಲಾದ ಮೂಲಸೌಕರ್ಯಗಳು ನಾಶವಾಗಿವೆ. ಅವುಗಳನ್ನು ಮತ್ತೆ ಹಿಂದಿನ ಸ್ಥಿತಿಗೆ ತರುವ ಸವಾಲು ಸಚಿವರ ಮುಂದಿದೆ.

ಡಿಸಿ ಮನ್ನಾ ಭೂಮಿ ಹಂಚಿಕೆ
ತಾಲೂಕಿನಲ್ಲಿ ನೂರಾರು ಎಕರೆ ಡಿಸಿ ಮನ್ನಾ ಭೂಮಿ ಹಂಚಿಕೆಗೆ ಬಾಕಿಯಿದ್ದು, ಹೆಚ್ಚಿನ ಭಾಗ ಅತಿಕ್ರಮಣ ಆರೋಪಗಳಿವೆ. ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದ ವೇಳೆ ಜಿಲ್ಲೆಗೆ ಭೇಟಿ ನೀಡಿ ಹಂಚಿಕೆ ಮಾಡುವ ಭರವಸೆ ನೀಡಿದ್ದರು. ಹಿಂದಿನ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಬೆಳ್ತಂಗಡಿಗೆ ಭೇಟಿ ನೀಡಿದ್ದಾಗಲೂ ಈ ಕುರಿತು ಚರ್ಚೆ ಯಾಗಿತ್ತು. ಈ ಬಾರಿಯಾದರೂ ಭೂಮಿ ಹಂಚಿಕೆಯಾಗ ಬಹುದೇ ಎಂದು ಫಲಾನುಭವಿಗಳು ನಿರೀಕ್ಷೆಯಲ್ಲಿದ್ದಾರೆ.

ಮೂಲಸೌಕರ್ಯ ಕೊರತೆ
ಎಳನೀರು, ಬಾಂಜಾರುಮಲೆ, ಪುಲ್ಲಾಜೆ, ಅನಾರು ಪ್ರದೇಶಗಳು ಸೌಕರ್ಯಗಳ ಕೊರತೆಯಿಂದ ಬಳಲು ತ್ತಿದ್ದು, ನೂತನ ಸಚಿವರು ಗಮನಹರಿ ಸುವರೇ ಎಂಬ ನಿರೀಕ್ಷೆ ಜನರದು.

Advertisement

ಕಸ್ತೂರಿ ರಂಗನ್‌ ವರದಿ
ಕಸ್ತೂರಿರಂಗನ್‌ ವರದಿ ಜಾರಿಯ ಮಾತು ಹಿಂದಿನ ಸರಕಾರದ ಅವಧಿ ಯಲ್ಲಿ ಜೋರಾಗಿತ್ತು. ಈ ಕುರಿತೂ ತಾಲೂಕಿನ ಗ್ರಾಮೀಣ ಪ್ರದೇಶದ ಜನತೆ ಗೊಂದಲದಲ್ಲಿದ್ದಾರೆ. ಅರಣ್ಯ ಪ್ರದೇಶ ದಲ್ಲಿ ಮನೆ ಮಾಡಿ ಕೃಷಿ ಚಟುವಟಿಕೆ ಗಳನ್ನು ನಡೆಸುತ್ತಿರುವವರನ್ನು ಒಕ್ಕಲೆ ಬ್ಬಿಸುವ ಮಾತಿದೆ. ಅಂಥವರಿಗೆ ಸಚಿವರು ನ್ಯಾಯ ಒದಗಿಸುವರೇ ಎಂಬುದು ಪ್ರಶ್ನೆ. ಗ್ರಾಮ ಅರಣ್ಯ ಹಕ್ಕು ಕಾಯ್ದೆಯಲ್ಲಿ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಬಹುತೇಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯಾಗದೆ ಇರುವುದು ಇಲ್ಲಿರುವ ಸಮಸ್ಯೆ.

Advertisement

Udayavani is now on Telegram. Click here to join our channel and stay updated with the latest news.

Next