Advertisement

ಪ್ರಧಾನಿ ಮೌನ ದೇಶದ್ರೋಹ: ಸಿದ್ದರಾಮಯ್ಯ

05:29 AM Jun 18, 2020 | Team Udayavani |

ಬೆಂಗಳೂರು: ಚೀನಾ ಗಡಿ ಭಾಗದಲ್ಲಿ ತಂಟೆ ತೆಗೆದು 7 ವಾರಗಳಾದರೂ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದು ಜನ ದ್ರೋಹ ಅಷ್ಟೇ ಅಲ್ಲ ದೇಶದ್ರೋಹ ವಾಗುತ್ತದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿ, ಚೀನಾ ಗಡಿ ಭಾಗದ ಲ್ಲಿ ನಡೆಯುತ್ತಿರುವ ಗಲಾಟೆ ಬಗ್ಗೆ ಹಾಗೂ ಗಡಿಯಲ್ಲಿನ ಬೆಳ ವಣಿಗೆ ಕುರಿತು ಪ್ರಧಾನಿ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಇಲ್ಲಿಯವರೆಗೆ ಅಧಿಕೃತ  ಹೇಳಿಕೆ ನೀಡಿಲ್ಲ. ಆಳುವವರ ಮೌನ ಜನದ್ರೋಹ ವಲ್ಲದೇ ದೇಶದ್ರೋಹವೂ ಹೌದು.

ದೇಶದ ಪ್ರತಿಯೊಬ್ಬ ಪ್ರಜೆಯೂ ಕೇಂದ್ರ ಸರ್ಕಾರವನ್ನು ನಂಬಿದ್ದಾರೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಂಬಿಕೆ ಉಳಿಸಿಕೊಳ್ಳುವ ಹೊಣೆ ಕೇಂದ್ರ  ಸರ್ಕಾರದ್ದು. ವೀರ ಸೈನಿಕರ ಬಲಿದಾನ ವ್ಯರ್ಥವಾ ಗಬಾರದು. ಹುತಾತ್ಮರ ಕುಟುಂಬಕ್ಕೆ ಗೌರವದ ಶ್ರದಾಟಛಿಂಜಲಿ ಸಲ್ಲಿಸೋಣ. ಚೀನಾದ ದೃಷ್ಕೃತ್ಯ ಖಂಡಿಸೋಣ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next