Advertisement

ಕಡಲ ತಡಿಯಲ್ಲಿ ಮೋದಿ ಅಲೆ: ಸಿಎಂ ಆಗಿದ್ದಾಗಲೂ ಬಂದಿದ್ದರು ಪಿಎಂ ಆದಾಗಲೂ ಬಂದರು !

01:12 AM May 03, 2023 | Team Udayavani |

ಪ್ರಧಾನಿ ಮೋದಿಗೂ ಕರಾವಳಿಗೂ ವಿಶೇಷ ನಂಟು. ಕರಾವಳಿಗೆ ಬಂದಾಗಲೆಲ್ಲ  “ಮೋದಿ ಮೇನಿಯಾ’ ಎನ್ನುವಂತೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುತ್ತಿದ್ದರು.  ಕರಾವಳಿಗೆ ಬಂದು ಮನಬಿಚ್ಚಿ ಮಾತನಾಡುವುದು ಅವರ ಸಂಪ್ರದಾಯ. ಹತ್ತು ವರ್ಷಗಳಲ್ಲಿ ಕರಾವಳಿಗೆ  ಭೇಟಿ ಕೊಟ್ಟ ಸಂದರ್ಭಗಳನ್ನು ಉದಯವಾಣಿ ಸಂಗ್ರಹದಿಂದ ಹೆಕ್ಕಿ ಜೋಡಿಸಿಟ್ಟಿದ್ದೇವೆ. ಇಂದು ಮೂಲ್ಕಿಯಲ್ಲಿ ಮತ್ತೆ ಅವರ ಚುನಾವಣ ಪ್ರಚಾರ. ಈ ಸಂದರ್ಭದಲ್ಲಿ  ಅವಲೋಕನ.

Advertisement

ಮಂಗಳೂರು: ಗುಜರಾತ್‌ ಮುಖ್ಯ ಮಂತ್ರಿಯಾಗಿ, ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರು ಹಲವು ಬಾರಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದಾರೆ.  ಮೋದಿ ಆಗಮನದಲ್ಲಿ ಬಹುತೇಕ ಸಲ ಚುನಾ ವಣ ಪ್ರಚಾರವೇ ಉದ್ದೇಶವಾಗಿತ್ತು. ಕೆಲವು ಬಾರಿ ಸರಕಾರಿ ಕಾರ್ಯಕ್ರಮಗಳಿಗೆ ಬಂದಿದ್ದರು.

2013 ಮೇ 2ರಂದು ಮೋದಿ ಗುಜರಾತ್‌ ಮುಖ್ಯ ಮಂತ್ರಿಯಾಗಿದ್ದಾಗ ಕರ್ನಾ ಟಕ ವಿಧಾನಸಭೆ ಚುನಾವಣೆಗೆ ಸ್ಟಾರ್‌ ಪ್ರಚಾರಕರಾಗಿ ಆಗ ಮಿಸಿ ನೆಹರೂ ಮೈದಾನದಲ್ಲಿ ಬೃಹತ್‌ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಜನಸ್ತೋಮ ಕಿಕ್ಕಿರಿದು ತುಂಬಿತ್ತು.

2014 ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಆಗಮಿಸಿದ್ದ ಅವರು ಫೆ. 19ರಂದು ನೆಹರೂ ಮೈದಾನದಲ್ಲಿ ಬೃಹತ್‌ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಆಗ ನೆಹರೂ ಮೈದಾನ ಕಿಕ್ಕಿರಿದಿದ್ದಲ್ಲದೆ ಹೊರಭಾಗದ ರಸ್ತೆ ಗಳಲ್ಲಿ ಕಾಲು ಹಾಕಲೂ ಜಾಗವಿಲ್ಲದಾಗಿತ್ತು.

2016 ಪ್ರಧಾನಿಯಾದ ಬಳಿಕ ಬಂದದ್ದು 2016ರ ಮೇ 8ರಂದು. ಕೇರಳ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಇಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದರು. ಯಾವುದೇ ಸಭೆ ಇರಲಿಲ್ಲ.

Advertisement

2017 ಅ. 29ರಂದು ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆಗ ಅಭಿವೃದ್ಧಿಯ ಮಂತ್ರ ಪಠಿಸಿದ್ದ ಅವರು, ಕರಾವಳಿ ಯಲ್ಲಿ ಆರ್ಥಿಕ ಅಭಿವೃದ್ಧಿಗಾಗಿ ಸೀವೀಡ್‌ ಬೆಳೆಯುವ ಬಗ್ಗೆ ಸಲಹೆಯಿತ್ತಿದ್ದರು.

2017 ಅದೇ ವರ್ಷ ಡಿ. 18ರಂದು ಲಕ್ಷದ್ವೀಪಕ್ಕೆ ತೆರಳುವ ಹಾದಿಯಲ್ಲಿ ಮಂಗಳೂರಿನ ಸಕೀìಟ್‌ ಹೌಸ್‌ನಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು. ರಾತ್ರಿ 12.30ಕ್ಕೆ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು ಹೊರಗೆ ಬರುವಾಗ ಸಹಸ್ರ ಸಂಖ್ಯೆಯಲ್ಲಿ ಜನ ಅವರಿಗಾಗಿ ಕಾಯುತ್ತಿದ್ದರು. ಅದನ್ನೂ ಅವರು ಬಳಿಕ ಟ್ವಿಟರ್‌ನಲ್ಲಿ ಉಲ್ಲೇಖೀಸಿ ಮಂಗಳೂರಿನ ಜನತೆಗೆ ಧನ್ಯವಾದ ಹೇಳಿದ್ದರು.

2018 ಮೇ 1ರಂದು ವಿಧಾನಸಭಾ ಚುನಾ ವಣೆ ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ ಉಡುಪಿ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಹಾಗೂ ಮೇ 5ರಂದು ನೆಹರೂ ಮೈದಾನದಲ್ಲಿ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

2022 20ರ ಸೆಪ್ಟಂಬರ್‌ 2ರಂದು ಮಂಗಳೂರಿ ನ ಗೋಲ್ಡ್‌ಫಿಂಚ್‌ ಸಿಟಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮೋದಿ ಪಾಲ್ಗೊಂಡು ಮಾತನಾಡಿದ್ದರು. ಆ ಬಾರಿ ಯಾವುದೇ ರಾಜಕೀಯದ ಮಾತುಗಳನ್ನಾಡದೆ ಕೇವಲ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತ್ರವೇ ಉಲ್ಲೇಖೀಸಿ ತೆರಳಿದ್ದರು.

ಮೋದಿ ಉಡುಪಿಗೆ ಬಂದಿದ್ದರು!

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರು 2018ರ ಮೇ 1ರಂದು ಚುನಾವಣೆ ಪ್ರಚಾರಕ್ಕೆ ಉಡುಪಿಗೆ ಆಗಮಿಸಿದ್ದರು. ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಜಿಲ್ಲೆಯಲ್ಲಿ ಐದೂ ಕ್ಷೇತ್ರಗಳನ್ನು ಗೆಲ್ಲಲು ಈ ಮೋದಿ ಅಲೆ ಸಹಾಯ ಮಾಡಿತ್ತು ಎಂಬ ಮಾತು ಕೇಳಿಬಂದಿತ್ತು.

ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಂಚಮ ಪಯಾರ್ಯದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್‌ ವ್ಯವಸ್ಥೆಯಲ್ಲಿ ಭಾಗವಹಿಸಿ ಭಾಷಣ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next