Advertisement

ಬೆಳ್ತಂಗಡಿಯಿಂದ 15 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿ

08:53 PM Apr 13, 2019 | mahesh |

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಬಿಜೆಪಿ ಚುನಾವಣ ಪ್ರಚಾರ ಸಭೆ ಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದು, ಈ ಸಮಾವೇಶದಲ್ಲಿ ಬೆಳ್ತಂಗಡಿಯಿಂದ 15 ಸಾವಿರಕ್ಕೂ ಅಧಿಕ ಮಂದಿ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಪಾಲ್ಗೊಂಡಿದ್ದರು.

Advertisement

ಬೆಳ್ತಂಗಡಿ ಕ್ಷೇತ್ರದ ಎಲ್ಲ 243 ಬೂತ್‌ಗಳಿಂದಲೂ ತಲಾ ಒಂದೊಂದು ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಆದರೆ ಕಾರ್ಯಕರ್ತರ ಸಂಖ್ಯೆ ಹೆಚ್ಚಿದ್ದ ಹಿನ್ನೆಲೆಯಲ್ಲಿ ಕೆಲವು ಕಡೆಗಳಿಂದ ಎರಡೆರಡು ವಾಹನಗಳ ವ್ಯವಸ್ಥೆಯಿತ್ತು. ಶನಿವಾರ ಬೆಳಗ್ಗಿನಿಂದಲೇ ತಾಲೂಕಿನ ಗ್ರಾಮೀಣ ಭಾಗದಿಂದ ಹೊರಟ ಕಾರ್ಯ ಕರ್ತರು ಪ್ರಧಾನಿ ನರೇಂದ್ರ ಮೋದಿ ಸಹಿತ ಬಿಜೆಪಿ ಪಕ್ಷಕ್ಕೆ ಜೈಕಾರ ಹಾಕುತ್ತಾ ಸಾಗಿದರು.

ಬೆಳ್ತಂಗಡಿ ಕ್ಷೇತ್ರದಿಂದ ಖಾಕಿಧಾರಿಗಳಾಗಿ ಭಾಗವಹಿಸಿದ್ದ ಸಾವಿರಾರು ಕಾರ್ಯ ಕರ್ತರು ಸಮಾವೇಶದ ಪ್ರಮುಖ ಆಕ ರ್ಷಣೆಯಾಗಿದ್ದರು. ಖಾಕಿ ಶರ್ಟ್‌, ಖಾಕಿ ಪ್ಯಾಂಟ್‌, ಖಾಕಿ ಟೋಪಿ ಧರಿಸಿ, ಮೈ ಭಿ ಚೌಕಿದಾರ್‌ ಎಂದು ಬರೆಸಿಕೊಂಡು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಶಾಸಕ ಹರೀಶ್‌ ಪೂಂಜ ಅವರೂ ಕಾರ್ಯಕರ್ತರ ಜತೆ ಖಾಕಿ ಬಟ್ಟೆ ತೊಟ್ಟು ಬೆಳಗ್ಗಿನಿಂದಲೇ ಮಂಗಳೂರಿನ ಬಿಜೆಪಿ ಚುನಾವಣ ಕಚೇರಿ ಸಹಿತ ಸಮಾವೇಶ ಮೈದಾನದಲ್ಲಿ ಭಾಗವಹಿಸಿದ್ದರು. ಇವರ ಜತೆ ಕಾರ್ಯಕರ್ತರು ಸೆಲ್ಫಿ ತೆಗೆದುಕೊಂಡರು.

ಬಂಟ್ವಾಳದಿಂದ ಕಾರ್ಯಕರ್ತರು
ಬಂಟ್ವಾಳ: ಮಂಗಳೂರಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ 15 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದಾರೆ ಎಂದು ಬಂಟ್ವಾಳ ಕ್ಷೇತ್ರ ಅಧ್ಯಕ್ಷ ದೇವದಾಸ ಶೆಟ್ಟಿ ತಿಳಿಸಿದ್ದಾರೆ. ಕ್ಷೇತ್ರದಿಂದ ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ನೇತೃತ್ವ ದಲ್ಲಿ ಕೇಸರಿ ಶಾಲು, ಪೇಟ ತೊಟ್ಟ ಕಾರ್ಯ ಕರ್ತರು ಸ್ವಯಂಪ್ರೇರಿತರಾಗಿ ಬಂದು ಭಾಗವಹಿಸಿದ್ದಾರೆ ಎಂದವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next