Advertisement

CBSE ಟಾಪರ್‌ಗೆ ಫೋನ್‌ನಲ್ಲಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

03:01 AM Jul 28, 2020 | Hari Prasad |

ಕೊಚ್ಚಿ: ‘ಶಭಾಸ್‌ ವಿನಾಯಕ, ಶಭಾಸ್‌, ಹೇಗಿದೆ ಜೋಶ್‌?’, ಅನಿರೀಕ್ಷಿತವಾಗಿ ಬಂದ ಈ ಮಾತುಗಳನ್ನು ಕೇಳಿದಾಗ ವಿನಾಯಕ ಎಂ. ಮಲಿಲ್‌ಗೆ ಹೇಳಿಕೊಳ್ಳಲಾರದಷ್ಟು ಸಂತೋಷ.

Advertisement

ಕಾರಣ, ಈ ರೀತಿ ಕುಶಲೋಪರಿ ವಿಚಾರಿಸಿದ್ದು, ಈ ದೇಶದ ಪ್ರಧಾನಿ, ನರೇಂದ್ರ ಮೋದಿ.

ಇಡುಕ್ಕಿಯ ನೆರಿಯಾಮಂಗಲಮ್‌ ನಿವಾಸಿಯಾಗಿರುವ ವಿನಾಯಕ, ಜವಾಹರ ನವೋದಯ ವಿದ್ಯಾಲಯದ ವಿದ್ಯಾರ್ಥಿ.

ಈ ಸಲದ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಟಾಪರ್‌ ಆಗಿ ಹೊರಹೊಮ್ಮಿದ್ದಾನೆ.

ಅಕೌಂಟೆನ್ಸಿ, ಬಿಸಿನೆಸ್‌ ಸ್ಟಡೀಸ್‌ ಮತ್ತು ಇನ್‌ಫಾರ್ಮೇಷನ್‌ ಪ್ರ್ಯಾಕ್ಟೀಸ್‌ಗಳಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾನೆ. ಎಸ್‌ಸಿ/ಎಸ್‌ಟಿ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಅಗ್ರಸ್ಥಾನ ಪಡೆದಿದ್ದಾನೆ.

Advertisement

ಈ ಹಿನ್ನೆಲೆಯಲ್ಲಿ ಮೋದಿಯವರು ರವಿವಾರ ತಮ್ಮ ‘ಮನ್‌ ಕಿ ಬಾತ್‌’ನ ಅಂಗವಾಗಿ ವಿನಾಯಕನಿಗೆ ಕರೆ ಮಾಡಿದರು.

ದಿಲ್ಲಿಗೆ ಬರಲು ಇಚ್ಛಿಸುತ್ತೀಯಾ ಎಂದು ಮೋದಿಯವರು ಕೇಳಿದಾಗ, ಹೌದು, ಬಿ.ಕಾಂ.ಮಾಡಲು ಉದ್ದೇಶಿಸಿದ್ದೇನೆ.
ಇದಕ್ಕಾಗಿ ದಿಲ್ಲಿ ವಿವಿಗೆ ಅರ್ಜಿ ಸಲ್ಲಿಸಿದ್ದೇನೆ ಎಂದ. ಅಲ್ಲದೆ, ತನ್ನ ಹವ್ಯಾಸಗಳ ಬಗ್ಗೆಯೂ ತಿಳಿಸಿದ. ವಿನಾಯಕನ ತಂದೆ ಮನೋಜ್‌ ಮಲಿಲ್‌, ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next