Advertisement

ಯಲಚಗೆರೆಯಲ್ಲಿ ಪ್ರಧಾನಿ ಮೋದಿ ಬೃಹತ್ ಸಭೆ; ಶ್ರೀಕಂಠೇಶ್ವರನಿಗೆ ಪ್ರಾರ್ಥನೆ

07:10 PM May 07, 2023 | Team Udayavani |

ನಂಜನಗೂಡು: ತಾಲೂಕಿನ ಯಲಚಗೆರೆ ಬೋರೆಯಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿ ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯ ಕೊನೆಯ ಪ್ರಚಾರ ಸಭೆಯಲ್ಲಿ ಭಾಗಿಯಾದರು.

Advertisement

ಸಭೆ ಮುಗಿದ ನಂತರ ಪ್ರಧಾನಿ ಮೋದಿ ದಕ್ಷಿಣಕಾಶಿಯ ಆರಾಧ್ಯ ದೇವ ನಂಜನಗೂಡಿನ ಶ್ರೀಕಂಠೇಶ್ವರನ ದರ್ಶನ ಪಡೆದರು. ದೇವಾಲಯದಲ್ಲಿ ಶ್ರೀಕಂಠೇಶ್ವರನ ಸಾಯಂಕಾಲ ವಿಶೇಷ ಪೂಜೆಯಲ್ಲಿ ಭಾಗಿಯಾದರು.

ನಂಜನಗೂಡಿನಲ್ಲಿ 3,000 ಪೊಲೀಸರು ಹಾಗೂ ವಿಶೇಷ ಭದ್ರತಾ ಪಡೆಯನ್ನು ನಿಯೋಜಿಸಲಾಗಿತ್ತು. ಶನಿವಾರದಿಂದಲೇ ಆಗಮಿಸಿದ ಪೊಲೀಸರು ಹಾಗೂ ಎನ್‌ಎಸ್‌ಜೆ ದಳದವರು ಬೋರೆಯಿಂದ ನಂಜನಗೂಡು ನಗರದ ಅಪೋಲೊ ವೃತ್ತ, ಶ್ರೀಕಂಠೇಶ್ವರ ದೇವಾಲಯ ಆವರಣದವರಿಗೆ ರಾಷ್ಟ್ರೀಯ ಹೆದ್ದಾರಿ 766ರ ಇಕ್ಕೆಲಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next