Advertisement

ಆಯುಷ್ಮಾನ್‌ ಭಾರತ್‌ ಯೋಜನೆಗೆ ರಾಷ್ಟ್ರಪತಿ ಕೋವಿಂದ್‌ ಪ್ರಶಂಸೆ

05:30 PM Dec 22, 2018 | udayavani editorial |

ಕರೀಂನಗರ, ತೆಲಂಗಾಣ : ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಮುಂಚೂಣಿಯ ಹಾಗೂ ಮಹತ್ವಾಕಾಂಕ್ಷೆಯ ‘ಆಯುಷ್ಮಾನ್‌ ಭಾರತ್‌’ ಅರೋಗ್ಯ ವಿಮೆ ಕಾರ್ಯಕ್ರಮವನ್ನು ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ಪ್ರಶಂಸಿಸಿದ್ದಾರೆ.

Advertisement

ಹಣ ಇಲ್ಲದ ಕಾರಣಕ್ಕೆ ಆರೋಗ್ಯ ಸೇವೆಯಿಂದ  ಯಾರೊಬ್ಬರೂ ವಂಚಿತರಾಗಬಾರದು ಎಂಬ ಉದ್ದೇಶದೊಂದಿಗೆ ರೂಪಿಸಲಾಗಿರುವ ಈ ಯೋಜನೆಯಿಂದ ಎಲ್ಲ ವರ್ಗದ ಜನರಿಗೆ ಪ್ರಯೋಜನವಾಗಲಿದೆ ಎಂದವರು ಹೇಳಿದರು.

ದೇಶದ ಜನರಿಗೆ ಇನ್ನೂ ಉತ್ತಮ ಆರೋಗ್ಯ ಸೇವೆಯನ್ನು ಕೊಡುವ ಸಲುವಾಗಿ ಸಾರ್ವಜನಿಕ, ಮುನಿಸಿಪಲ್‌ ಮತ್ತು ಚ್ಯಾರಿಟೇಬಲ್‌ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಮತ್ತು ಶುಶ್ರೂಷಾ ಕೇಂದ್ರಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ರಾಷ್ಟ್ರಪತಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next