Advertisement

ಬಿಜೆಪಿ ಸೇರ್ಪಡೆಗೆ ಒತ್ತಡ, ಶೀಘ್ರವೇ ನಿರ್ಧಾರ: ಚವ್ಹಾಣ

11:30 PM Jul 07, 2019 | Lakshmi GovindaRaj |

ವಿಜಯಪುರ: ಜಿಲ್ಲೆಯಲ್ಲಿ ಮೈತ್ರಿ ಪಕ್ಷಗಳ ಪ್ರಭಾವಿ ನಾಯಕರು ನನ್ನನ್ನು ರಾಜಕೀಯವಾಗಿ ತುಳಿಯುತ್ತಿದ್ದರೆ, ಮತ್ತೂಂದೆಡೆ ಬಿಜೆಪಿ ಸೇರಲು ಸಮಾಜದ ಸ್ವಾಮೀಜಿಗಳು, ಕ್ಷೇತ್ರದ ಮತದಾರರು ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಸಿಎಂ ಕುಮಾರಸ್ವಾಮಿ ಕೈಗೊಳ್ಳುವ ನಿರ್ಧಾರದ ಮೇಲೆ ನನ್ನ ಮುಂದಿನ ರಾಜಕೀಯ ನಡೆ ಇರುತ್ತದೆ ಎಂದು ನಾಗಠಾಣ ಜೆಡಿಎಸ್‌ ಶಾಸಕ ದೇವಾನಂದ ಚವ್ಹಾಣ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಜಿಲ್ಲೆಯ ಮೈತ್ರಿ ಪಕ್ಷಗಳ ಪ್ರಭಾವಿ ನಾಯಕರ ಮಧ್ಯೆ ನಾನು ರಾಜಕೀಯ ಮಾಡಬೇಕಿದೆ. ಕೆಲವು ರಾಜಕೀಯ ನಾಯಕರು ನನ್ನನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಮತ್ತೂಂದೆಡೆ ಬಿಜೆಪಿ ಸೇರುವಂತೆ ನನ್ನ ಮೇಲೆ ನಿರಂತರ ಒತ್ತಡ ಹೇರಲಾಗುತ್ತಿದೆ, ಈಗಲೂ ಒತ್ತಡ ಹೇರುವ ಕೆಲಸ ನಡೆದೇ ಇದೆ.

ಜಿಲ್ಲೆಯ ಬಿಜೆಪಿ ಪ್ರಭಾವಿ ನಾಯಕರು, ಸಮಾಜದ ಸ್ವಾಮಿಗಳು ಮಾತ್ರವಲ್ಲ ನನ್ನ ಕ್ಷೇತ್ರದ ಮತದಾರರ ಮೂಲಕವೂ ಒತ್ತಡ ಹೇರುವ ಕೆಲಸ ನಡೆದಿದೆ. ಇಂಥ ಸಂದರ್ಭದಲ್ಲಿ ರಾಜ್ಯದ ರಾಜಕೀಯ ಬೆಳವಣಿಗೆ ಕುರಿತು ಸಿಎಂ ಕುಮಾರಸ್ವಾಮಿ ಕೈಗೊಳ್ಳುವ ನಿರ್ಧಾರದ ಮೇಲೆ ನನ್ನ ಭವಿಷ್ಯದ ರಾಜಕೀಯ ನಡೆ ಇರಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next