Advertisement

ದ.ಕ.: ನಾಲ್ವರು ಪೊಲೀಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

11:41 AM Jun 23, 2019 | keerthan |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಪೊಲೀಸ್‌ ಅಧಿಕಾರಿ
ಗಳು ರಾಷ್ಟ್ರಪತಿಗಳ ಪದಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಜು. 5ರಂದು ಬೆಂಗಳೂರಿನ ರಾಜಭವನ ದಲ್ಲಿ ನಡೆಯುವ ಸಮಾರಂ ಭದಲ್ಲಿ ಪದಕ ಪ್ರದಾನ ನೆರವೇರಲಿದೆ.

Advertisement

ಮಂಗಳೂರಿನ ನಿವೃತ್ತ ಎಸಿಪಿ ಉದಯ ನಾಯಕ್‌, ಸಿಸಿಆರ್‌ಬಿ ಎಸಿಪಿ ವಿನಯ್‌ ಎ. ಗಾಂವ್‌ಕರ್‌, ಎಸಿಬಿ ಡಿವೈಎಸ್‌ಪಿ ಸುಧೀರ್‌ ಎಂ. ಹೆಗ್ಡೆ ಮತ್ತು ಈ ಹಿಂದೆ ಮಂಗಳೂರಿನಲ್ಲಿದ್ದು, ಪ್ರಸ್ತುತ ಭಟ್ಕಳದಲ್ಲಿ ಡಿವೈಎಸ್‌ಪಿ ಆಗಿರುವ ವೆಲೆಂಟೈನ್‌ ಡಿ’ಸೋಜಾ ಅವರು ರಾಷ್ಟ್ರಪತಿ ಪದಕ ಸ್ವೀಕರಿಸಲಿರುವ ಪೊಲೀಸ್‌ ಅಧಿಕಾರಿಗಳು.

ಈ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆ ಈ ಹಿಂದೆ ಆಗಿದ್ದು, ಇದೀಗ ಪದಕ ವಿತರಣೆ ನಡೆಯುತ್ತಿದೆ. ರಾಜ್ಯದಲ್ಲಿ 2017ರಿಂದ ರಾಷ್ಟ್ರಪತಿ ಪದಕ ವಿತರಣೆ ಬಾಕಿ ಇದೆ

Advertisement

Udayavani is now on Telegram. Click here to join our channel and stay updated with the latest news.

Next