Advertisement

ವಿದೇಶಿ ಯುವತಿ ವಿವಾಹಕ್ಕೆ ರಾಷ್ಟ್ರಪತಿ ನೆರವು!

09:54 AM Jan 08, 2020 | Hari Prasad |

ಹೊಸದಿಲ್ಲಿ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ನೀಡಲಾಗಿದ್ದ ಬಿಗಿ ಭದ್ರತೆಯಿಂದಾಗಿ ಪರೋಕ್ಷವಾಗಿ ತೊಂದರೆಗೀಡಾಗಿದ್ದ ವಿದೇಶಿ ಯುವತಿಯೊಬ್ಬರಿಗೆ ಖುದ್ದು ಕೋವಿಂದ್‌ ನೆರವಿನ ಹಸ್ತ ಚಾಚಿರುವ ಬಗ್ಗೆ ವರದಿಯಾಗಿದೆ.

Advertisement

3 ತಿಂಗಳ ಹಿಂದೆ ವಿದೇಶಿ ಜೋಡಿಯೊಂದು ಕೊಚ್ಚಿಯ ತಾಜ್‌ ಹೊಟೇಲಿನಲ್ಲಿ ಜ.6ರಂದು ತಮ್ಮ ವಿವಾಹ ನೆರವೇರಿಸಿಕೊಳ್ಳಲು ನಿರ್ಧರಿಸಿ ಆ ಹೊಟೇಲ್‌ನ ಹಾಲ್‌ ಬುಕ್‌ ಮಾಡಿತ್ತು. ರಾಷ್ಟ್ರಪತಿ ಅದೇ ದಿನ ಅದೇ ಹೊಟೇಲಿನಲ್ಲಿ ತಂಗಬೇಕಿದ್ದರಿಂದ ಬಿಗಿಭದ್ರತೆ ಕಾರಣ ನೀಡಿದ ಹೊಟೇಲ್‌ ಅಧಿಕಾರಿಗಳು, ವಿವಾಹ ಕಾರ್ಯಕ್ರಮವನ್ನು ಬೇರೆಡೆಗೆ ಸ್ಥಳಾಂತರಿಸಲು ಯುವತಿಯನ್ನು ಕೋರಿದ್ದರು.

ಇದನ್ನು ಯುವತಿ, ಟ್ವೀಟ್‌ ಮೂಲಕ ಕೋವಿಂದ್‌ ಅವರ ಗಮನಕ್ಕೆ ತಂದಿದ್ದರು. ಅದಕ್ಕೆ ಸ್ಪಂದಿಸಿದ ರಾಷ್ಟ್ರಪತಿ ಭವನ, ರಾಷ್ಟ್ರಪತಿಯವರ ಭದ್ರತೆಯಿಂದ ವಿವಾಹಕ್ಕೆ ತೊಂದರೆ ಆಗಬಾರದು ಎಂದು ಹೊಟೇಲ್‌ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಟ್ವೀಟ್‌ ಮಾಡಿ, ನವಜೋಡಿಗೆ ಶುಭಾಶಯವನ್ನೂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next