Advertisement

Rescue: ಅಪರಿಚಿತ ವಾಹನ ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡ ಕೋಣದ ರಕ್ಷಣೆ

06:15 PM Oct 16, 2023 | Team Udayavani |

ಗಂಗಾವತಿ: ನಗರದ ರಾಣಾಪ್ರತಾಪಸಿಂಗ್ ವೃತ್ತದಲ್ಲಿ ಅಪರಿಚಿತ ವಾಹನದಿಂದ ಅಪಘಾತಕ್ಕೀಡಾಗಿ ಕಾಲು ಕಳೆದುಕೊಂಡ ಕೋಣವನ್ನು ನವ ಚೇತನ್ಯ ಸಮಾಜ ವಿಕಾಸ ಸೇವಾ ಟ್ರಸ್ಟ್ ಸಮಾಜ ಸೇವಕರು ಸಂರಕ್ಷಣೆ ಮಾಡಿ ಕೊಪ್ಪಳದ ಗೋಶಾಲೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ.

Advertisement

ನಗರದಲ್ಲಿ ಬಿಡಾಡಿ ದನಗಳು ಮತ್ತು ಎಮ್ಮೆ ಕೋಣಗಳ ಸಂಖ್ಯೆ ಹೆಚ್ಚಾಗಿದ್ದು ರಾಯಚೂರು ರಸ್ತೆಯಲ್ಲಿ ಅಪರಿಚಿತ ವಾಹನ ರಾತ್ರಿ ಸಂದರ್ಭದಲ್ಲಿ ಕೋಣಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೋಣದ ಹಿಂದಿನ ಎಡಗಾಲು ಮುರಿದು ತುಂಡಾಗಿತ್ತು. ದಾರಿಯಲ್ಲಿ ಹೋಗುವವರು ಗಮನಿಸಿ ಹೋಗುತ್ತಿದ್ದರೆ ನವ ಚೇತನ್ಯ ಸಮಾಜ ವಿಕಾಸ ಸೇವಾ ಟ್ರಸ್ಟ್ ಸಮಾಜ ಸೇವಕರು ಸಂರಕ್ಷಣೆ ಮಾಡಿ ಕೂಡಲೇ ಕೋಣವನ್ನು ಪಶು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮುರಿದು ತುಂಡಾಗಿದ್ದ ಕಾಲನ್ನು ಪಶು ವೈದ್ಯರಿಂದ ಜೋಡಣೆ ಮಾಡಿಸಿ ಕೊಪ್ಪಳದ ಗೋಶಾಲೆಗೆ ಸೇರ್ಪಡೆ ಮಾಡಿದ್ದಾರೆ.

ಈ ಸಂಸ್ಥೆಯವರು ಪ್ರತಿ ವಾರ ಅನಾಥ ಆಶ್ರಮದಲ್ಲಿರುವ ವೃದ್ಧರಿಗೆ ಕ್ಷೌರ ಮಾಡುವುದು ಅಂಧ,ಅಂಗವಿಕಲ ಮಕ್ಕಳಿಗೆ ನೆರವಾಗುವುದು ಮತ್ತು ಬಿಡಾಡಿ ದನಗಳನ್ನು ರಾತ್ರಿ ವೇಳೆ ಅಪರಿಚಿತ ವಾಹನಗಳು ಅಪಘಾತ ಮಾಡದಂತೆ ರೇಡಿಯಂ ಬೆಲ್ಟ್ ಹಾಕುವ ಕಾರ್ಯವನ್ನು ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next