Advertisement
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಕುಮಾರ ಕೃಪಾ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ಟ್ರಸ್ಟ್ ರವಿವಾರ ಆಯೋ ಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ “ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
ಗಳು ಗ್ರಾಮ ಪಂಚಾಯತ್ನಲ್ಲಿಯೇ ದೊರೆಯುವಂತೆ ಮಾಡಲಾಗಿದೆ. ಅಮೃತ ಗ್ರಾಮ ಪಂಚಾಯತ್ ಹೆಸರಿನಲ್ಲಿ ಸ್ವಚ್ಛತೆ ಸಹಿತ ಇನ್ನಿತರ ಅಭಿವೃದ್ಧಿ ಮಾಡುವವರಿಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. ಗಾಂಧಿ ಚಿಂತನೆ, ಗ್ರಾಮ ಸ್ವರಾಜ್ಯ ವಿಚಾರಗಳ ಯೋಜನೆ ಯಶಸ್ವಿಗೊಳಿಸಲು ಸ್ಥಳೀಯ ನಾಯಕರಿಗೆ ತರಬೇತಿ ನೀಡುವ ಅಗತ್ಯ ಇದೆ ಎಂದರು.
Related Articles
Advertisement
ಸಚಿವರಾದ ಗೋವಿಂದ ಕಾರ ಜೋಳ, ಆರಗ ಜ್ಞಾನೇಂದ್ರ, ಎಂಟಿಬಿ ನಾಗರಾಜ್, ಸಂಸದ ಎಲ್. ಹನುಮಂತಯ್ಯ, ಶಾಸಕ ಪಿ. ರಾಜೀವ್, ವಾರ್ತಾ ಇಲಾಖೆ ಆಯುಕ್ತ ಡಾ| ಪಿ.ಎಸ್. ಹರ್ಷ ಮುಂತಾದವರಿದ್ದರು.
ಖಾದಿ ಜುಬ್ಟಾ, ಅಂಗಿ ಖರೀದಿಸಿದ ಸಿಎಂಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದ ಬಳಿಕ ಖಾದಿ ಮಳಿಗೆಗೆ ಭೇಟಿ ನೀಡಿ ವಸ್ತ್ರಗಳನ್ನು ಖರೀದಿಸಿದರು. 2 ಪ್ಯಾಂಟ್, 6 ಅಂಗಿಗಳು, ಒಂದು ಡಜನ್ ಕರವಸ್ತ್ರಗಳು ಹಾಗೂ 4 ಜುಬ್ಟಾಗಳನ್ನು ಕೊಂಡುಕೊಂಡರು. ಪ್ರಶಸ್ತಿ ಮೊತ್ತ ನಿಮ್ಹಾನ್ಸ್ಗೆ
ಗಾಂಧಿ ಸೇವಾ ಪ್ರಶಸ್ತಿ ಪುರಸ್ಕಾ ರದ 5 ಲಕ್ಷ ರೂ., ಪತ್ನಿ ಹೆಸರಲ್ಲಿ ರುವ 1.9 ಕೋಟಿ ರೂ. ಹಾಗೂ ಮನೆಯನ್ನು ನಿಮ್ಹಾನ್ಸ್ಗೆ ದಾನವಾಗಿ ನೀಡಲಾಗುವುದು ಎಂದು ನಿಮ್ಹಾನ್ಸ್ನ ನಿವೃತ್ತ ವೈದ್ಯ ಡಾ| ಸಿ.ಆರ್. ಚಂದ್ರಶೇಖರ್ ತಿಳಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ದೇಶದಲ್ಲಿ ಇಂದಿಗೂ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸಲಾಗುತ್ತಿದೆ. ಶಾಲಾ- ಕಾಲೇಜುಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಬೇಕಿದೆ ಎಂದರು.