Advertisement

ಸಂಸಾರದ ಒಳಗೊಂದು ಪ್ರಸೆಂಟ್‌ ಪ್ರಪಂಚ!

03:35 PM May 12, 2023 | Team Udayavani |

“ಪ್ರಸೆಂಟ್‌ ಪ್ರಪಂಚ 0% ಲವ್‌’- ಹೀಗೊಂದು ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಇಂದು ಬಿಡುಗಡೆಯಾಗುತ್ತಿದೆ. ಅಭಿರಾಮ್‌ ಈ ಚಿತ್ರದ ನಿರ್ದೇಶಕ. ಅರ್ಜುನ್‌ ಮಂಜುನಾಥ್‌ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡುವ ಚಿತ್ರತಂಡ, “ನಮ್ಮ ಚಿತ್ರದ ನಿರ್ದೇಶಕ ಅಭಿರಾಮ್‌ ಎ ಅವರಿಗೂ ಈ ಚಿತ್ರದ ಬಗ್ಗೆ ಅಪಾರ ಪ್ರೀತಿ. ಆದರೆ ವಿಧಿ, ಚಿತ್ರ ಬಿಡುಗಡೆಗೆ ಮುನ್ನವೇ ನಿರ್ದೇಶಕ ಅಭಿರಾಮ್‌ ಹಾಗೂ ನಾಯಕ ಅರ್ಜುನ್‌ ಮಂಜುನಾಥ್‌ ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಅವರಿಬ್ಬರ ಅನುಪಸ್ಥಿತಿ ತುಂಬಾ ಕಾಡುತ್ತಿದೆ. ಇಬ್ಬರು ಚಿತ್ರೀಕರಣ ಹಾಗೂ ಡಬ್ಬಿಂಗ್‌ ಮುಗಿಯುವ ತನಕ ಜೊತೆಗಿದ್ದರು. ಆಮೇಲೆ ಯಾರು ನಿರೀಕ್ಷಿಸದ ಘಟನೆ ನಡೆದು ಹೋಯಿತು.

ಆನಂತರ ದ್ವಿತೀಯ ನಾಯಕ ಯಶಸ್‌ ಅಭಿ ಸೇರಿದಂತೆ ಚಿತ್ರತಂಡದ ಸದಸ್ಯರ ಸಹಕಾರದಿಂದ ಸಿನಿಮಾ ಪೂರ್ಣವಾಗಿದ್ದು, ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಒಂದಷ್ಟು ಹೊಸ ರೀತಿಯ ಪ್ರಯೋಗಗಳನ್ನು ಈ ಸಿನಿಮಾದಲ್ಲಿ ಮಾಡಲಾಗಿದೆ ಎಂಬುದು ಚಿತ್ರತಂಡದ ಮಾತು. ನೋವಿನ ನಡುವೆಯೂ ಮತ್ತೆ ಎಲ್ಲರೂ ಒಂದಾಗಿ ಈ ಚಿತ್ರ ಪೂರ್ಣಗೊಳಿಸಿದ್ದೇವೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಜನರಿಗೆ ಇಷ್ಟವಾಗುತ್ತದೆ’ ಎನ್ನುವುದು ನಾಯಕ ಯಶಸ್‌ ಅಭಿ.

ಚಿತ್ರದ ಕಥಾಹಂದರದ ಬಗ್ಗೆ ಹೇಳುವುದಾದರೆ, ಗಂಡ -ಹೆಂಡತಿ ನಡುವೆ ವೈಮನಸ್ಯ ಸಹಜ. ಆದರೆ ಅದು ವಿಚ್ಛೇದನದ ತನಕ ಹೋಗಬಾರದು ಎಂಬ ಕಾನ್ಸೆಪ್ಟ್ನಡಿ ಈ ಸಿನಿಮಾ ಮಾಡಲಾಗಿದೆ.

ಸಂಭ್ರಮಶ್ರೀ ಚಿತ್ರದ ನಾಯಕಿ. ಉಳಿದಂತೆ ತಬಲ ನಾಣಿ, ಎಸ್‌.ನಾರಾಯಣ್, ಓಂ ಪ್ರಕಾಶ್‌ ರಾವ್‌, ಸಂಜನಾ ಆನಂದ್‌, ಚಂದನ್‌ ಆಚಾರ್‌, ಗೋವಿಂದೇ ಗೌಡ, ಕುರಿ ಸುನಿಲ್‌ ಮುಂತಾದವರು ನಟಿಸಿದ್ದಾರೆ. ಕೃಷ್ಣಮೂರ್ತಿ ಎಲ್‌ ಮತ್ತು ರವಿಕುಮಾರ್‌ ಹೆಚ್‌ ಪಿ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next