Advertisement
ಈ ಬಾರಿಯೂ ನಗರ ಪ್ರದೇಶಗಳಲ್ಲಿ ಹೆತ್ತವರು ತಮ್ಮ ವಾರ್ಡ್ ಶಾಲೆಗಳ ಜತೆಗೆ ಪಕ್ಕದ ವಾರ್ಡ್ ಶಾಲೆಗಳಿಗೂ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಆದರೆ, ಪ್ರವೇಶ ಪ್ರಕ್ರಿಯೆಯಲ್ಲಿ ಮೊದಲು ಆ ವಾರ್ಡ್ನ ಮಕ್ಕಳಿಗೆ ಆದ್ಯತೆ ನೀಡಲಾಗುವುದು. ಬಳಿಕ ಸೀಟು ಉಳಿದರೆ ಮಾತ್ರ ನೆರೆಯ ವಾರ್ಡ್ ಮಕ್ಕಳಿಗೆ ಹಂಚಿಕೆಯಾಗಲಿದೆ.
Related Articles
Advertisement
ಮಾ.1ರಿಂದ 31ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗು ವುದು. ಸದ್ಯದಲ್ಲೇ ಅಧಿಸೂಚನೆ ಹೊರಬೀಳಲಿದೆ.ಹೆತ್ತವರು ಆನ್ಲೈನ್ನಲ್ಲಿ ಆಧಾರ್ ಬಯೋಮೆಟ್ರಿಕ್ ಮೂಲಕ ಅಥವಾ ವನ್ಟೈಮ್ ಪಾಸ್ವರ್ಡ್ (ಓಟಿಪಿ) ಬಳಸಿ ಅರ್ಜಿ ಸಲ್ಲಿಸಬಹುದು. ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರ ಕಚೇರಿಗಳಲ್ಲೂ ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಹೆತ್ತವರು ಮನೆಯಲ್ಲೇ ಕಂಪ್ಯೂಟರ್, ಇಂಟರ್ನೆಟ್ ವ್ಯವಸ್ಥೆ ಇದ್ದರೆ ಅರ್ಜಿ ಸಲ್ಲಿಸಬಹುದು. ಅಥವಾ ಯಾವುದೇ ಕಂಪ್ಯೂಟರ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಅಷ್ಟೇ ಅಲ್ಲದೆ, ನಗರ ಪ್ರದೇಶಗಳಲ್ಲಿ ಬೆಂಗಳೂರು ವನ್, ಕರ್ನಾಟಕ ವನ್ ಕೇಂದ್ರಗಳು, ಗ್ರಾಮೀಣ ಭಾಗದ ನಾಡ ಕಚೇರಿ, ಅಟಲ್ಜೀ ಜನಸ್ನೇಹಿ ಕೇಂದ್ರಗಳಲ್ಲಿ 15 ರೂ. ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಎಂದು ವಿವರಿಸಿದರು. ಒಂದು ಮಗುವಿಗೆ ಒಂದೇ ಅರ್ಜಿ ಸಲ್ಲಿಸಲು ಮಾತ್ರ
ಅವಕಾಶ ಇರುತ್ತದೆ. ಉಳಿದಂತೆ ಹೆತ್ತವರು ತಮ್ಮ ವಾರ್ಡ್ ವ್ಯಾಪ್ತಿಯ 5 ಶಾಲೆಗಳನ್ನು ಪ್ರವೇಶಕ್ಕೆ ಆದ್ಯತೆ ಮೇಲೆ ಆಯ್ಕೆ ಮಾಡಬಹುದು. ಆಧಾರ್ ಕಾರ್ಡ್ನಲ್ಲಿ ಇರುವ ಜನ್ಮ
ದಿನಾಂಕದ ಆಧಾರದಲ್ಲಿ ಮಗು ಎಲ್ಕೆಜಿ ಅಥವಾ 1ನೇ ತರಗತಿ ಪ್ರವೇಶಕ್ಕೆ ಅರ್ಹವಾ ಎಂದು ಸಾಫ್ಟ್ವೇರ್ ವ್ಯವಸ್ಥೆಯೇ ನಿರ್ಧರಿಸುತ್ತದೆ. ಆಧಾರ್ನಲ್ಲಿ ಮಗು ಮತ್ತು ಹೆತ್ತವರ ವಿಳಾಸ ಮತ್ತು ಪಿನ್ ಕೋಡ್ ಒಂದೇ ಇದ್ದರೆ ಮಾತ್ರ ಪ್ರವೇಶ ದೊರೆಯುತ್ತದೆ. ಬೇರೆ ಬೇರೆ ಇದ್ದರೆ ಅದನ್ನು ಸಮೀಪದ ಆಧಾರ್ ಕೇಂದ್ರಗಳಲ್ಲಿ ಬದಲಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ಇನ್ನು ಆದಾಯ, ಜಾತಿ ಪ್ರಮಾಣ ಪತ್ರ ಸೇರಿದಂತೆ ಮಗು ವಿನ ಎಲ್ಲ ದಾಖಲೆಗಳ ಪರಿಶೀಲನೆಯೂ ಆನ್ಲೈನ್ನಲ್ಲೇ ನಡೆಯುತ್ತದೆ. ಅರ್ಜಿಯಲ್ಲಿ ಕೇವಲ ತಮ್ಮ ಪ್ರಮಾಣ ಪತ್ರದ ಸಂಖ್ಯೆಯನ್ನು ಮಾತ್ರ ನಮೂದಿಸಿದರೆ ಸಾಕು.
ಆತ್ಮಹತ್ಯೆಗೊಳಗಾದ ರೈತರ ಮಕ್ಕಳಿಗೆ ಆದ್ಯತೆ: ಸರಕಾರದ ಸೂಚನೆಯಂತೆ ಈ ಬಾರಿ ಸಾಲಬಾಧೆಯಿಂದ ಆತ್ಮಹತ್ಯೆಗೊಳಗಾದ ರೈತರ ಮಕ್ಕಳಿಗೆ ಈ ಬಾರಿ ಆರ್ಟಿಇ ಪ್ರವೇಶದಲ್ಲಿ ವಿಶೇಷ ಆದ್ಯತೆ ನೀಡಲಾಗುವುದು. ಇದರ ಜತೆಗೆ ಈ ಹಿಂದೆ ಇದ್ದಂತೆ ಬೀದಿ ಮಕ್ಕಳು, ಎಚ್ಐವಿ, ವಲಸಿಗ ಮಕ್ಕಳು ಸೇರಿದಂತೆ ವಿಶೇಷ ವರ್ಗದ ಮಕ್ಕಳಿಗೆ ಆದ್ಯತೆ ಮುಂದುವರಿಯಲಿದೆ.