Advertisement

ಕಾರ್ಕಳ ತಾ| 17ನೇ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ

11:04 PM Jan 23, 2021 | Team Udayavani |

ಕಾರ್ಕಳ: ಕಾರ್ಕಳ  ತಾಲೂಕು  ಸಾಹಿತ್ಯ ಸಮ್ಮೇಳನ ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಮುದ್ದಣ ವೇದಿಕೆ ಹಾಲ್ಡಿನ್‌ ಗ್ಲಾಸ್‌ ಹಾಲ್‌ನಲ್ಲಿ  ಜ. 30ರಂದು ನಡೆಯಲಿದೆ ಎಂದು ತಾ| 17ನೇ ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷ ಕೆ.ಮಂಜುನಾಥ ಶೆಟ್ಟಿ ತಿಳಿಸಿದರು.

Advertisement

ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು  ಸಮ್ಮೇಳನದಲ್ಲಿ ವಿವಿಧ ಕ್ಷೇತ್ರ ಗಳಲ್ಲಿ ಸೇವೆಗೈದ 17 ಸಾಧಕರನ್ನು ಸಮ್ಮಾನಿಸ

ಲಾಗುವುದು. 2 ಗೋಷ್ಠಿಗಳು  ನಡೆಯ ಲಿದೆ. ಕನ್ನಡ ನಾಡು, ಭಾಷೆ, ಸಂಸ್ಕೃತಿ, ಕಲೆ ಇವುಗಳನ್ನು ಕಟ್ಟಿ ಬೆರಳೆಸುವ ಕಾರ್ಯಕ್ಕೆ  ಪೂರಕವಾಗಿ  ಸಾಹಿತ್ಯ ಪರಿಷತ್‌  ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.

ಉಡುಪಿ ಜಿಲ್ಲಾ ಪಂಚಾಯತ್‌ ಕೃಷಿ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಸುಮಿತ್‌ ಶೆಟ್ಟಿ ಅಂದು ಬೆಳಗ್ಗೆ 8ಕ್ಕೆ  ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಪರಿಷತ್‌ನ ಧ್ವಜಾರೋಹಣವನ್ನು ಸಂಘದ ತಾಲೂಕು ಘಟಕಾಧ್ಯಕ್ಷ ಪ್ರಭಾಕರ ಶೆಟ್ಟಿ

ಕೊಂಡಳ್ಳಿ ನೆರವೇರಿಸುವರು. ಬೆಳಗ್ಗೆ 8.30ಕ್ಕೆ ಸಮ್ಮೇಳನಾಧ್ಯಕ್ಷರನ್ನು ಗೌರವಪೂರ್ವಕವಾಗಿ ಎದುರುಗೊಳ್ಳುವ ಹಾಗೂ ಕನ್ನಡ

Advertisement

ತಾಯಿ ಭುವನೇಶ್ವರಿಯ ಭವ್ಯ ಮೆರವಣಿಗೆ ಅದ್ದೂರಿಯಿಂದ ನಡೆಯಲಿದೆ.  ಮೆರವಣಿಗೆ ಬೈಲೂರು ಶ್ರೀ  ಮಾರಿಯಮ್ಮ ದೇವಿಯ ಸನ್ನಿಧಿಯಿಂದ ವೇದಿಕೆ ತನಕ ನಡೆಯಲಿದೆ. ಮೆರವಣಿಗೆ ಉದ್ಘಾಟನೆಯನ್ನು ಉದ್ಯಮಿ ಜೆ.ಸುಧೀರ್‌ ಹೆಗ್ಡೆ  ನೆರವೇರಿಸಲಿದ್ದಾರೆ. ಶಾಸಕ ವಿ. ಸುನಿಲ್‌ಕುಮಾರ್‌ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಮ್ಮೇಳನಾಧ್ಯಕ್ಷೆಯನ್ನು ಮನೋಹರ್‌ ಪ್ರಸಾದ್‌ ವಹಿಸಲಿದ್ದಾರೆ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿ ಸಲ್ಲಿಸಲಿದ್ದಾರೆ. ಸಂಘದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ ಎಂದರು.

ಸಮಾರೋಪ ಸಮಾರಂಭದಲ್ಲಿ 17 ಮಂದಿ ಸಾಧಕರನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್‌ ಶೆಟ್ಟಿ ಸಮ್ಮಾನಿಸಲಿದ್ದಾರೆ. ಹಿರಿಯ ಸಾಹಿತಿ ಡಾ| ನಾ. ದಾಮೋದರ ಶೆಟ್ಟಿಗಾರ್‌ ಸಮಾರೋಪದ ಭಾಷಣ ಮಾಡಲಿದ್ದಾರೆ ಎಂದರು.

ಕಸಾಪ ತಾ| ಘಟಕದ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಶಾಂತಿನಾಥ ಜೋಗಿ, ಉಪಾಧ್ಯಕ್ಷ ಅನಂತ ಪಟ್ಟಾಭಿರಾಮ್‌, ಗೌರವ ಕೋಶಾಧಿಕಾರಿ ಅರುಣ್‌ ರಾವ್‌ ಮುಂಡ್ಕೂರು ಉಪಸ್ಥಿತರಿದ್ದರು.

ಗಮನಕ್ಕೆ ಬಾರದೆ ಕಾರ್ಯಕ್ರಮ :

ಪರಿಷತ್‌ ಸರಕಾರದಿಂದ ಅನುದಾನ ಪಡೆಯುವ ಸಂಸ್ಥೆ. ಪಾರದರ್ಶಕವಾಗಿ ಪರಿಷತ್‌ನ ನಿಬಂಧನೆಗಳಿಗೆ ಒಳಪಟ್ಟು  ಚಟುವಟಿಕೆ ನಡೆಸುತ್ತದೆ. ತಾಲೂಕು ಘಟಕಕ್ಕೆ ಮಾಹಿತಿ ನೀಡದೆ ತಾ| ವ್ಯಾಪ್ತಿಯಲ್ಲಿ  ಸಾಹಿತ್ಯಿಕ ವಿಚಾರದಲ್ಲಿ ಕೆಲವು ಕಾರ್ಯಕ್ರಮ ನಡೆಯುತ್ತಿರುವ ಕುರಿತು ದೂರುಗಳು ಬರುತ್ತಿವೆ. ಗಮನಕ್ಕೆ ತರುವ ಪ್ರಯತ್ನ ನಡೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಹೇಳಿದರು.

ಕನ್ನಡ ಕಟ್ಟುವ ಕೆಲಸ :

ಕನ್ನಡ ಮನಸ್ಸುಗಳು  ಒಂದೆಡೆ ಸೇರಿ ಕನ್ನಡ ಕಟ್ಟುವ ಕೆಲಸಗಳು ಸಾಹಿತ್ಯ ಸಮ್ಮೇಳನಗಳ ಮೂಲಕ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ನಡೆಯುತ್ತದೆ. ಕೋವಿಡ್‌-19 ಮುನ್ನೆಚ್ಚರಿಕೆ ವಹಿಸಿಕೊಂಡು ಕಾರ್ಯಕ್ರಮ ನಡೆಸುತ್ತಿದ್ದೇವೆ. ಸೀಮಿತ ಸಂಖ್ಯೆಯಲ್ಲಿ ಮಕ್ಕಳು ಸಮ್ಮೇಳನದಲ್ಲಿ  ಭಾಗವಹಿಸುವರು ಎಂದು  ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next