Advertisement

ಕಲಾವಿದರ ಸಂಘದಲ್ಲಿ ಬೆಂಕಿಯ ಬಲೆ ಪ್ರದರ್ಶನ

01:09 PM Oct 07, 2020 | Suhan S |

ಸಿನಿಮಾ ಬಿಡುಗಡೆಗೆ ಮುನ್ನ ಪ್ರೀಮಿಯರ್‌ ಶೋ ಮಾಡಿ, ತಮ್ಮ ಆಪ್ತರಿಗೆ, ಮಾಧ್ಯಮದವರಿಗೆ ತೋರಿಸೋದು ಸಹಜ. ಆದರೆ, ಕೋವಿಡ್ ಬಳಿಕ ಚಿತ್ರರಂಗದ ಎಲ್ಲಾ ಚಟುವಟಿಕೆಗಳು ಸ್ತಬ್ಧವಾಗಿದ್ದವು. ಲಾಕ್‌ಡೌನ್‌ ತೆರವಾದ ನಂತರ ಚಿತ್ರೀಕರಣ ಆರಂಭವಾಗಿದ್ದರೂ, ಚಿತ್ರದ ಪ್ರೀಮಿಯರ್‌ ಶೋ ಯಾರೂ ಮಾಡಿರಲಿಲ್ಲ. ಆದರೆ, ಮಂಗಳವಾರಕನ್ನಡ ಚಿತ್ರವೊಂದರ ಪ್ರೀಮಿಯರ್‌ ಶೋ ಆಗುವ ಮೂಲಕ ಕೋವಿಡ್ ಬಳಿಕ ಪ್ರೀಮಿಯರ್‌ ಆದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Advertisement

ಹೀಗೆ ಪ್ರೀಮಿಯರ್‌ ಆದ ಸಿನಿಮಾ “ಬೆಂಕಿಯ ಬಲೆ’. ಮಂಗಳವಾರ ಚಾಮರಾಜಪೇಟೆಯಕಲಾವಿದರ ಸಂಘದಲ್ಲಿ ಈ ಚಿತ್ರದ ಪ್ರೀಮಿಯರ್‌ ಶೋ ನಡೆದಿದೆ. ಸಿನಿಮಾ ತಂಡ ಹಾಗೂ ಆಪ್ತರು ಚಿತ್ರವನ್ನುಕಣ್ತುಂಬಿಕೊಂಡಿದ್ದಾರೆ. ಈ ಚಿತ್ರವನ್ನು ಶಿವಾಜಿ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಚಿತ್ರ ಈ ತಿಂಗಳಾಂತ್ಯಕ್ಕೆಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಚಿತ್ರದ ಬಂದ ಹಣವನ್ನುಕ್ಯಾನ್ಸರ್‌ ಪೀಡಿತರಿಗೆ ನೀಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ­

Advertisement

Udayavani is now on Telegram. Click here to join our channel and stay updated with the latest news.

Next