Advertisement

ಕೆಜಿಎಫ್‌ ಎಡಿಟರ್‌ ಕುಡ್ಲ ಪ್ರವೇಶ !

07:22 AM Jan 17, 2019 | |

ಮೊನ್ನೆ ಮೊನ್ನೆ ಬಂದು ದೇಶ- ವಿದೇಶದಲ್ಲಿ ಸೌಂಡ್‌ ಮಾಡಿದ ಸಿನೆಮಾ ಕೆಜಿಎಫ್‌. ಯಶ್‌ ಅಭಿನಯದ ಈ ಸಿನೆಮಾ ಎಲ್ಲಕ್ಕಿಂತಲೂ ಮುಖ್ಯವಾಗಿ ತಾಂತ್ರಿಕವಾಗಿ ಬಹಳಷ್ಟು ರಿಚ್ ಆಗಿ ಮೂಡಿ ಬಂದ ಸಿನೆಮಾ. ಕೆಮರಾ, ಎಡಿಟಿಂಗ್‌ ಸಹಿತ ಎಲ್ಲ ಹಂತದಲ್ಲಿಯೂ ಸಿನೆಮಾ ಪವರ್‌ಫುಲ್‌ ಆಗಿಯೇ ಮೂಡಿಬಂದಿದೆ. ಈ ಸಿನೆಮಾದ ಸಂಕಲನದ ಜವಾಬ್ದಾರಿ ನಿರ್ವಹಿಸಿದವರು ಶ್ರೀಕಾಂತ್‌. ಕಳೆದ ಹಲವು ತಿಂಗಳಿನಿಂದ ಅವರು ಈ ಸಿನೆಮಾದಲ್ಲಿ ಬ್ಯುಸಿಯಾಗಿದ್ದರು.

Advertisement

ಸದ್ಯ ಸಿನೆಮಾ ಬಿಡುಗಡೆ ಆಗಿ ಗೆಲುವಿನ ಹುಮ್ಮಸ್ಸಿನಲ್ಲಿರುವಾಗಲೇ ಶ್ರೀಕಾಂತ್‌ ಅವರು ಮಂಗಳೂರಿನತ್ತ ಕಣ್ಣಿಟ್ಟಿದ್ದಾರೆ. ಯಾಕೆಂದರೆ, ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡ ಸಿನೆಮಾದ ನಿರ್ದೇಶಕ ತುಳುವಿನ ಚೇತನ್‌ ಮುಂಡಾಡಿ ಅವರ ಹೊಸ ಸಿನೆಮಾ ‘ಪ್ರವೇಶ’ದ ಸಂಕಲನವನ್ನು ಅವರೇ ಮಾಡಲಿದ್ದಾರೆ. ಇದು ನಿಜಕ್ಕೂ ಕೋಸ್ಟಲ್‌ವುಡ್‌ ಪಾಲಿಗೆ ಬಹುದೊಡ್ಡ ಕೊಡುಗೆ. ಅಂದಹಾಗೆ, ಚೇತನ್‌ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟ ‘ಮದಿಪು’ ಸಿನೆಮಾದ ಸಂಕಲನವನ್ನೂ ಅವರೇ ಮಾಡಿದ್ದರು. ಈಗ ಎರಡನೇ ತುಳು ಸಿನೆಮಾವಾಗಿ ‘ಪ್ರವೇಶ’ದ ಸಂಕಲನ ಮಾಡಲಿದ್ದಾರೆ. ಚೇತನ್‌ ಹಾಗೂ ಶ್ರೀಕಾಂತ್‌ 17 ವರ್ಷಗಳಿಂದ ಆತ್ಮೀಯ ಸ್ನೇಹಿತರು. ಇಬ್ಬರೂ ಜತೆಯಾಗಿ ಸಿನೆಮಾ ಇಂಡಸ್ಟ್ರಿಯಲ್ಲಿ ಬೆಳೆದವರು. ಈಗ ಕೆಜಿಎಫ್‌ ಎಂಬ ಸಕ್ಸಸ್‌ ಸಿನೆಮಾ ಮಾಡಿದ ಬಳಿಕ ಫುಲ್‌ ಬ್ಯುಸಿ ಇದ್ದರೂ ಕೂಡ ಶ್ರೀಕಾಂತ್‌ ತುಳುವಿನ ಮೇಲಿನ ಪ್ರೀತಿಯಿಂದ ಪ್ರವೇಶದ ಸಂಕಲನಕ್ಕೆ ಮನಸ್ಸು ಮಾಡಿರುವುದು ನಮಗೆ ಖುಷಿ ತಂದಿದೆ ಎಂಬುದು ಚೇತನ್‌ ಅಭಿಪ್ರಾಯ. •

Advertisement

Udayavani is now on Telegram. Click here to join our channel and stay updated with the latest news.

Next