Advertisement
ಸದ್ಯ ಸಿನೆಮಾ ಬಿಡುಗಡೆ ಆಗಿ ಗೆಲುವಿನ ಹುಮ್ಮಸ್ಸಿನಲ್ಲಿರುವಾಗಲೇ ಶ್ರೀಕಾಂತ್ ಅವರು ಮಂಗಳೂರಿನತ್ತ ಕಣ್ಣಿಟ್ಟಿದ್ದಾರೆ. ಯಾಕೆಂದರೆ, ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡ ಸಿನೆಮಾದ ನಿರ್ದೇಶಕ ತುಳುವಿನ ಚೇತನ್ ಮುಂಡಾಡಿ ಅವರ ಹೊಸ ಸಿನೆಮಾ ‘ಪ್ರವೇಶ’ದ ಸಂಕಲನವನ್ನು ಅವರೇ ಮಾಡಲಿದ್ದಾರೆ. ಇದು ನಿಜಕ್ಕೂ ಕೋಸ್ಟಲ್ವುಡ್ ಪಾಲಿಗೆ ಬಹುದೊಡ್ಡ ಕೊಡುಗೆ. ಅಂದಹಾಗೆ, ಚೇತನ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟ ‘ಮದಿಪು’ ಸಿನೆಮಾದ ಸಂಕಲನವನ್ನೂ ಅವರೇ ಮಾಡಿದ್ದರು. ಈಗ ಎರಡನೇ ತುಳು ಸಿನೆಮಾವಾಗಿ ‘ಪ್ರವೇಶ’ದ ಸಂಕಲನ ಮಾಡಲಿದ್ದಾರೆ. ಚೇತನ್ ಹಾಗೂ ಶ್ರೀಕಾಂತ್ 17 ವರ್ಷಗಳಿಂದ ಆತ್ಮೀಯ ಸ್ನೇಹಿತರು. ಇಬ್ಬರೂ ಜತೆಯಾಗಿ ಸಿನೆಮಾ ಇಂಡಸ್ಟ್ರಿಯಲ್ಲಿ ಬೆಳೆದವರು. ಈಗ ಕೆಜಿಎಫ್ ಎಂಬ ಸಕ್ಸಸ್ ಸಿನೆಮಾ ಮಾಡಿದ ಬಳಿಕ ಫುಲ್ ಬ್ಯುಸಿ ಇದ್ದರೂ ಕೂಡ ಶ್ರೀಕಾಂತ್ ತುಳುವಿನ ಮೇಲಿನ ಪ್ರೀತಿಯಿಂದ ಪ್ರವೇಶದ ಸಂಕಲನಕ್ಕೆ ಮನಸ್ಸು ಮಾಡಿರುವುದು ನಮಗೆ ಖುಷಿ ತಂದಿದೆ ಎಂಬುದು ಚೇತನ್ ಅಭಿಪ್ರಾಯ. • Advertisement
ಕೆಜಿಎಫ್ ಎಡಿಟರ್ ಕುಡ್ಲ ಪ್ರವೇಶ !
07:22 AM Jan 17, 2019 | |
Advertisement
Udayavani is now on Telegram. Click here to join our channel and stay updated with the latest news.