Advertisement

ಗೋವಿನ ಕಥೆ ಹೇಳಲಿದೆ ಪ್ರವೇಶ

01:41 PM Sep 27, 2018 | |

ರಾಷ್ಟ್ರ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್‌ ಮುಂಡಾಡಿ ನಿರ್ದೇಶನದ ಎರಡನೇ ಚಿತ್ರ ‘ಪ್ರವೇಶ’ ಚಿತ್ರೀಕರಣ ಮೊನ್ನೆ 13ರಿಂದ ಆರಂಭವಾಗಿದೆ. ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತು.

Advertisement

ಒಟ್ಟು 22 ದಿನ ಚಿತ್ರೀಕರಣ ನಡೆಯಲಿದ್ದು, ಈಗಾಗಲೇ ಎಂಟು ದಿನದ ಶೂಟಿಂಗ್‌ ಮುಗಿದಿದೆ. ಪೃಥ್ವಿ ಅಂಬರ್‌ ನಾಯಕ, ಬಿಂದು ರಕ್ಷಿಧಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಕತೆ, ಚಿತ್ರಕತೆ, ಸಂಭಾಷಣೆ ಚೇತನ್‌ ಮುಂಡಾಡಿ ಅವರದ್ದು. ವಿನು ಬಳಂಜ, ಜೋಗಿ ಕಥೆ ವಿಸ್ತರಿಸಿದ್ದಾರೆ.

ಈ ಚಿತ್ರಕ್ಕೂ ಮದಿಪು ಚಿತ್ರದ ತಂತ್ರಜ್ಞರ ಬಹುತೇಕ ತಂಡವೇ ಮುಂದುವರಿಯಲಿದೆ. ವಿ. ಮನೋಹರ್‌ ಸಂಗೀತ, ಛಾಯಾಗ್ರಾಹಣ- ಗಣೇಶ್‌ ಹೆಗಡೆ, ಉಗ್ರಂ ಶ್ರೀಕಾಂತ್‌ ಎಡಿಟಿಂಗ್‌ ವಿಭಾಗದಲ್ಲಿ ಕೆಲಸ ಮಾಡಲಿದ್ದಾರೆ. ಕುಂದಾಪುರದಲ್ಲಿ ನಡೆದ ಗೋ ಹತ್ಯೆ ಗಲಭೆ ಕುರಿತ ಘಟನೆ ಚಿತ್ರದ ಕಥಾವಸ್ತು. ಮೂಲತಃ ಕರಾವಳಿಯವರೇ ಆದ ಚೇತನ್‌ ಮುಂಡಾಡಿ ಈ ನೈಜ ಘಟನೆಗಳಿಗೆ ಚಿತ್ರದ ರೂಪ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next