Advertisement

ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿಯ ತಮ್ಮನಿಂದ ಜೀವ ಬೆದರಿಕೆ ಆರೋಪ

11:58 PM Sep 10, 2022 | Team Udayavani |

ಸುಳ್ಯ: ಹಿಂದೂ ಕಾರ್ಯಕರ್ತರೋರ್ವರಿಗೆ ಕೊಲೆ ಆರೋಪಿಯ ತಮ್ಮನೋರ್ವ ಜೀವ ಬೆದರಿಕೆ ಒಡ್ಡಿದ್ದು, ಆತನನ್ನು ಕೂಡಲೇ ಬಂಧಿಸಿ ಕಠಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬೆಳ್ಳಾರೆ ಪೊಲೀಸ್‌ ಠಾಣೆ ಬಳಿ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದು, ಪರಿಣಾಮ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡ ಘಟನೆ ಶನಿವಾರ ರಾತ್ರಿ ಬೆಳ್ಳಾರೆಯಲ್ಲಿ ಸಂಭವಿಸಿದೆ.

Advertisement

ಬೆಳ್ಳಾರೆಯ ಹಿಂದೂ ಕಾರ್ಯ ಕರ್ತ, ಸಂಸ್ಥೆಯೊಂದರ ಮ್ಯಾನೇಜರ್‌ ಆಗಿರುವ ಪ್ರಶಾಂತ್‌ ರೈ ಅವರಿಗೆ ಸಫ್ರೀದ್‌ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲ್ಲುವುದಾಗಿ ಬೆದರಿಕೆ ಒಡ್ಡಿರುವುದಾಗಿ ಆರೋಪಿ ಸಲಾಗಿದೆ. ಈ ಬಗ್ಗೆ ಅವರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಸಫ್ರೀದ್‌ ಎಸ್‌.ಡಿ.ಪಿ.ಐ. ಕಾರ್ಯಕರ್ತ ಎನ್ನಲಾಗಿದ್ದು, ಇತ್ತೀಚೆಗೆ ಹತ್ಯೆಗೀಡಾದ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಓರ್ವ ಆರೋಪಿ ಬೆಳ್ಳಾರೆಯ ಶಫೀಕ್‌ನ ತಮ್ಮ. ಈತನ ತಂದೆ ಇಬ್ರಾಹಿಂ ಅವರು ಪ್ರವೀಣ್‌ ಕೋಳಿ ಫಾರ್ಮ್ನಲ್ಲಿ ಕ್ಲೀನಿಂಗ್‌ ಕೆಲಸ ನಿರ್ವಹಿಸುತ್ತಿದ್ದರು.

ಠಾಣೆ ಮುಂದೆ ಜನ ಜಮಾವಣೆ
ಪ್ರಶಾಂತ್‌ ಅವರು ಬೆಳ್ಳಾರೆ ಠಾಣೆಗೆ ದೂರು ನೀಡಲು ತೆರಳಿದ ವೇಳೆ ನೂರಕ್ಕೂ ಅಧಿಕ ಸಂಖ್ಯೆಯ ಹಿಂದೂ ಕಾರ್ಯಕರ್ತರು ಠಾಣೆ ಬಳಿ ಜಮಾವಣೆಗೊಂಡು ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಒಂದು ಹಂತದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next