Advertisement

ಪ್ರತಿಭಾ ಕಾರಂಜಿ ಮಕ್ಕಳಿಗೆ ಪೂರಕ

03:48 PM Sep 04, 2017 | |

ಹೊನ್ನಾಳಿ: ಪ್ರಾಥಮಿಕ ಹಂತದಿಂದ ಪ್ರೌಢಶಾಲಾ ಹಂತದವರೆಗೆ ನಡೆಯುವ ಪ್ರತಿಭಾ ಕಾರಂಜಿ ಸ್ಪರ್ಧೆಗಳಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಪ್ತವಾದ ಪ್ರತಿಭೆ ಅರಳುತ್ತದೆ ಎಂದು ತಾಪಂ ಉಪಾಧ್ಯಕ್ಷ ಸಿ.ಆರ್‌. ಶಿವಾನಂದ್‌ ಹೇಳಿದರು. 

Advertisement

ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಅನಾವರಣಗೊಳ್ಳಲು ಪಠ್ಯೇತರ ಚಟುವಟಿಕೆಗಳು ಪೂರಕವಾಗಿ ಕೆಲಸ ಮಾಡುತ್ತವೆ ತಾಲೂಕಿನ ಬಾಲ ಪ್ರತಿಭೆಗಳು ರಾಜ್ಯಮಟ್ಟದವರೆಗೂ ಭಾಗವಹಿಸಿ ತಾಲೂಕಿನ ಹೆಸರನ್ನು ಗುರ್ತಿಸುವ ಕಾರ್ಯ ಮಾಡಲಿ ಎಂದು ಹಾರೈಸಿದರು.ಜಿಪಂ ಸದಸ್ಯರಾದ ಎಂ.ಆರ್‌.ಮಹೇಶ್‌, ದೀಪಾ ಜಗದೀಶ್‌, ಸುರೇಂದ್ರನಾಯ್ಕ,
ಬಿಆರ್‌ಸಿ ಎಚ್‌.ಎಸ್‌.ಉಮಾಶಂಕರ್‌, ಅಕ್ಷರದಾಸೋಹ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ, ಜಿಲ್ಲಾ ತರಬೇತಿ ಸಂಸ್ಥೆ ಉಪನ್ಯಾಸಕ ಲಕ್ಷ ಣ್‌, ಸಂಸ್ಥೆ ಕಾರ್ಯದರ್ಶಿ ಡಾ|ರಾಜಕುಮಾರ್‌, ಪ್ರಾಥಮಿಕ ಶಾಲಾ ಶಿಕ್ಷಕರು ಸಂಘದ ತಾಲೂಕು ಅಧ್ಯಕ್ಷ ಎಸ್‌.ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ
ಕೆ.ಎಂ. ಕರಿಬಸಯ್ಯ, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರಪ್ಪ ಮಾತನಾಡಿದರು. 

ಜಿಪಂ ಅಧ್ಯಕ್ಷೆ ಉಮಾ ರಮೇಶ್‌ ಉದ್ಘಾಟಿಸಿದರು. ತಾಪಂ ಅಧ್ಯಕ್ಷೆ ಸುಲೋಚನಮ್ಮ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಲ್‌. ರಂಗಪ್ಪ, ಇಸಿಒಗಳಾದ ಮಹಾಂತೇಶ್‌, ಗೋವಿಂದರಾಜ್‌, ಬಿಆರ್‌ಪಿ ಹನುಮಂತಪ್ಪ, ಸಿಆರ್‌ಪಿ ಮರಶುರಾಮಪ್ಪ, ಬಿವಿ ಸಂಸ್ಥೆ ಅಧ್ಯಕ್ಷೆ ಬಿ.ಎಲ್‌. ವೈಶ್ಯರ್‌, ಸರ್ಕಾರಿ ನೌಕರ ಒಕ್ಕೂಟ ಅಧ್ಯಕ್ಷ ಸಣ್ಣಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next