Advertisement

ದಳ್ಳಾಳಿ ವ್ಯವಸ್ಥೆಯಿಂದ ರೈತರನ್ನ ಮುಕ್ತ ಮಾಡುವುದು ತಪ್ಪಾ? : ಪ್ರತಾಪ್ ಸಿಂಹ

01:45 PM Sep 27, 2020 | sudhir |

ಮೈಸೂರು : ರೈತ ಪರ ಕಾಯ್ದೆ ಜಾರಿ ಮಾಡಿದ್ರೆ ರೈತರಿಗೆ ಆಗುವ ಅನುಕೂಲದ ಬಗ್ಗೆ ನಾವು ಯೋಚನೆ ಮಾಡ್ತಿವಿ. ಬಂದ್ ಮಾಡುವವರು ಬಂದ್ ನ ಲಾಭದ ಬಗ್ಗೆ ಯೋಚನೆ ಮಾಡುತ್ತಾರೆ ಹಾಗಾಗಿ ದಳ್ಳಾಳಿ ವ್ಯವಸ್ಥೆಯಿಂದ ರೈತರನ್ನ ಮುಕ್ತ ಮಾಡುವುದು ತಪ್ಪಾ? ರೈತನಿಗೆ ಮತ್ತು ಗ್ರಾಹಕನಿಗೆ ಲಾಭವಿಲ್ಲದ ದಳ್ಳಾಳಿಗೆ ಲಾಭವಿರುವ ಕಾಯ್ದೆ ತಿದ್ದುಪಡಿ ಮಾಡಿದ್ದು ತಪ್ಪಾ? ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

Advertisement

ರಾಜ್ಯಾದ್ಯಂತ ಸೋಮವಾರ ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಮಾತನಾಡಿದ ಸಂಸದ ಎಪಿಎಂಸಿ ಚುನಾವಣೆಗೆ ಲಕ್ಷಾಂತರ ಖರ್ಚು ಮಾಡಿ ಏಕೆ ನಡೆಸುತ್ತಾರೆ. ಲಾಭವಿಲ್ಲದೆ ಈ ರೀತಿ ಚುನಾವಣೆ ನಡೆಸಲು ಸಾಧ್ಯವೇ ? ರೈತರಿಂದಲೇ ಸೆಸ್ ಸುಲೀಗೆ ಮಾಡಿ ಲಾಭ ಮಾಡುತ್ತಿರುವವರು ದಳ್ಳಾಳಿಗಳು ಎಂದು ಹೇಳಿದರು.

ಸೂಪರ್ ಮಾರ್ಕೆಟ್ ಒಳಗೆ ಬಿಟ್ಟುಕೊಂಡಿದ್ದು ಯಾರು. ವಿರೋಧ ಮಾಡುವುದಿದ್ದರೇ ಸೂಪರ್ ಮಾರ್ಕೆಟ್‍ಗಳನ್ನೆ ವಿರೋಧ ಮಾಡಬೇಕಿತ್ತು.

ಇದನ್ನೂ ಓದಿ:ಕೆಲಸ ಕೊಡಿಸುವ ನೆಪ: ನಿಲ್ದಾಣದಲ್ಲೇ ಇಬ್ಬರು ರೈಲ್ವೆ ಅಧಿಕಾರಿಗಳಿಂದ ಯುವತಿಯ ಅತ್ಯಾಚಾರ

ಈ ಬಂದ್ ನಲ್ಲಿ ರೈತರು ಭಾಗಿಯಾಗ್ತಿಲ್ಲ, ಆದ್ರೆ ರೈತರ ಹೆಸರಿನ ಸಂಘಟನೆಗಳು ಭಾಗಿಯಾಗ್ತಿವೆ. ಈ ಬಂದ್‍ನಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಕರ್ನಾಟಕ ಬಂದ್ ನಡೆಸುವ ಸಂಘಟನೆಗಳ ವಿರುದ್ಧ ಸಂಸದ ಪ್ರತಾಪ್ ಸಿಂಹ ಗುಡುಗಿದ್ದಾರೆ.

Advertisement

ಸಂಸದ ತೇಜಸ್ವಿಸೂರ್ಯ ಬಿಜೆಪಿ ರಾಷ್ಟ್ರಿಯ ಯುವಮೋರ್ಚ ಅಧ್ಯಕ್ಷರಾಗಿ ಆಯ್ಕೆಯಾದ ವಿಚಾರಾದ ಬಗ್ಗೆ ಮಾತನಾಡಿದ ಸಂಸದ ಇದು ಕರ್ನಾಟಕ್ಕ ಸಿಕ್ಕ ಅತಿದೊಡ್ಡ ಮನ್ನಣೆಯಾಗಿದೆ. ಬಿಜೆಪಿ ಕರ್ನಾಟಕದ ವಿಚಾರದಲ್ಲಿ ಹೆಚ್ಚು ಪ್ರೀತಿ ಹೊಂದಿದೆ ಅದಕ್ಕಾಗಿ ರಾಷ್ಟ್ರೀಯ ಸಂಘಟನೆಯಲ್ಲಿ ಮೂವರಿಗೆ ಅವಕಾಶ ಸಿಕ್ಕಿದೆ. ಇದು ಕರ್ನಾಟಕದಲ್ಲಿ ಬಿಜೆಪಿ ಶಕ್ತಿಯನ್ನ ಬಿಂಬಿಸುತ್ತದೆ ಎಂದ ಸಂಸದ ಸಿ.ಟಿ.ರವಿ ಹಾಗೂ ರಾಜೀವ್ ಚಂದ್ರಶೇಖರ ಹಾಗೂ ತೇಜಸ್ವಿಸೂರ್ಯ ಅವರಿಗೆ ಅಭಿನಂದನೆಗಳನ್ನು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next