Advertisement

ಅವನ್ಯಾರೋ ಮರಿ ಖರ್ಗೆ ಸಿಎಂ ಬದಲಾಗ್ತಾರೆಂದು ಹೇಳ್ತಾನೆ….: ಪ್ರತಾಪ್ ಸಿಂಹ

02:04 PM Nov 14, 2021 | Team Udayavani |

ಮೈಸೂರು: ಭ್ರಷ್ಟಾಚಾರದಿಂದ ಬಂದ ಹಣ ಕಳೆದುಕೊಳ್ಳುವ ಭೀತಿಯಿಂದ ಕಾಂಗ್ರೆಸ್ ನವರು ಬಿಜೆಪಿ ವಿರುದ್ದ ಆರೋಪ ಮಾಡುತ್ತಿದ್ದಾರೆ. ಅವನ್ಯಾರೊ ಮರಿ ಖರ್ಗೆ ಸಿಎಂ ಬದಲಾಗುತ್ತಾರೆಂದು ಹೇಳುತ್ತಾನೆ. ಎಷ್ಟೇ ಗಾಳಿ ಸುದ್ದಿ ಹಬ್ಬಿಸಿದರೂ ಬೊಮ್ಮಾಯಿ ನೇತೃತ್ವದಲ್ಲೇ 2023 ರ ಚುನಾವಣೆ ಎದುರಿಸುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ನವರು ತಮ್ಮ ಮುಂದಿನ ಮುಖ್ಯಮಂತ್ರಿ ಯಾರು ಅಂತ‌ ಬಹಿರಂಗವಾಗಿ ಹೇಳಲಿ. ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗುವುದು ಸಂಪ್ರದಾಯ. ಆದರೆ ಮೊದಲು ನಿಮ್ಮ ಜಗಳ ಬಗೆ ಹರಿಸಿಕೊಳ್ಳಿ ಎಂದು ಟಾಂಗ್ ನೀಡಿದರು.

ಇದನ್ನೂ ಓದಿ:ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಹನುಮಂತನ ಬಾಲದಂತೆ ಬೆಳೆಯುತ್ತಿದೆ: ಪಟ್ಟಿ ಕೊಟ್ಟ ಜೆಡಿಎಸ್

ಸಿದ್ದರಾಮಯ್ಯರದ್ದು ಉಗಿದು ಓಡಿ ಹೋಗುವ ಕೆಲಸ. ಯಾರೋ ಬರೆದು ಕೊಟ್ಟ ಬಜೆಟನ್ನು ಓದಿದಂತಲ್ಲ. ಮಾತೆತ್ತಿದ್ದರೆ ಮೋದಿ ಬಗ್ಗೆ ಮಾತಾಡುತ್ತಾರೆ. ಬೊಮ್ಮಾಯಿ ನೆಮ್ಮದಿಯಿಂದ ಆಡಳಿತ ನಡೆಸಬಾರದೆಂದು ಬಾಹ್ಯ, ಆಂತರಿಕ ಶತೃಗಳು ಒಟ್ಟುಗೂಡಿ ಸಂಚು ರೂಪಿಸುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next