Advertisement

Surathkal ಪ್ರಶಾಂತ್‌, ಆಯೆಷಾ ಯಾನೆ ಅಕ್ಷತಾ ಠಾಣೆಗೆ ಹಾಜರು

01:10 AM Dec 09, 2023 | Team Udayavani |

ಸುರತ್ಕಲ್‌: ಸುರತ್ಕಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ 7ನೇ ಬ್ಲಾಕ್‌ ಕಾಟಿಪಳ್ಳ ಯುವಕ ಪ್ರಶಾಂತ್‌ ಭಂಡಾರಿ (31) ಮತ್ತು 3ನೇ ಬ್ಲಾಕ್‌ ಆಶ್ರಯ ಕಾಲನಿಯ ನಿವಾಸಿ ಆಯೇಷಾ ಮದುವೆಯಾಗಿ ಶುಕ್ರವಾರ ಸಂಜೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಹಾಜರಾಗಿ ತಮ್ಮ ಅಭಿಪ್ರಾಯ ಮಂಡಿಸಿದರು.

Advertisement

3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರು ಅನ್ಯ ಧರ್ಮಿàಯರಾದ ಕಾರಣ ಒಪ್ಪಿಗೆ ದೊರೆಯುವ ಅನುಮಾನ ಬಂದ ಮೇರೆಗೆ ಜತೆಯಾಗಿ ಡಿ. 1ರಂದು ನಾಪತ್ತೆಯಾಗಿದ್ದರು. ಇದೀಗ ವಿವಾಹವಾಗಿ ಪತ್ತೆಯಾಗಿದ್ದಾರೆ. ಆಯೆಷಾ ತನ್ನ ಹೆಸರನ್ನು ಅಕ್ಷತಾ ಎಂದು ಬದಲಾಯಿಸಿಕೊಂಡಿದ್ದಾರೆ.

ಪೊಲೀಸ್‌ ಠಾಣೆಗೆ ಭೇಟಿ ನೀಡಿದ ಸಂದರ್ಭ ಹಿಂದೂ ಸಂಘಟ ನೆಯ ಪ್ರಮುಖರು ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next