Advertisement

ಪ್ರಸಾದ ಸೇವನೆ: 120 ಮಂದಿ ಅಸ್ವಸ್ಥ

02:05 AM Apr 29, 2019 | sudhir |

ಶಿರಾ: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿನ್ನಪ್ಪನಹಳ್ಳಿ ಗ್ರಾಮದಲ್ಲಿ ಹರಸೇವೆ ಊಟ ಮಾಡಿದ 8-10 ಮಕ್ಕಳ ಸಹಿತ 120ಕ್ಕೂ ಹೆಚ್ಚು ಗ್ರಾಮಸ್ಥರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.

Advertisement

ಗ್ರಾಮದ ಆಂಜನೇಯ ಸ್ವಾಮಿಗೆ ಶನಿವಾರ ಹರಸೇವೆ ನಡೆದಿದ್ದು, ರಾತ್ರಿ ಗ್ರಾಮಸ್ಥರು ಪ್ರಸಾದವಾಗಿ ಅನ್ನ- ಸಾರು, ಪಾಯಸ, ಸಿಹಿ ಮತ್ತು ಖಾರಾ ಬೂಂದಿ ಊಟ ಮಾಡಿದ್ದರು. ರವಿವಾರ ಬೆಳಗಾಗುತ್ತಿದ್ದಂತೆ, ಹಲವರಿಗೆ ವಾಂತಿ, ಭೇದಿ, ತಲೆಭಾರ, ಜ್ವರ ತೊಂದರೆಗಳು ಕಾಣಿಸಿಕೊಂಡಿವೆ.

ಆಶಾ ಕಾರ್ಯಕರ್ತೆಯರು ಹಲವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. 40 ಮಂದಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next