Advertisement
ಜಂಗಿಪುರ್ ನ ಮಾಜಿ ಕಾಂಗ್ರೆಸ್ ಸಂಸದ ಹಾಗೂ ನಲ್ ಹಟಿ ಶಾಸಕ ಚುನಾವಣೆಗೂ ಮುನ್ನ ಮೃತರಾಗಿದ್ದ ಕಾರಣ ಆ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಬೇಕಾಗಿದ್ದು, ತೃಣ ಮೂಲ ಕಾಂಗ್ರೆಸ್ ಅಭಿಜಿತ್ ಮುಖರ್ಜಿ ಅವರಿಗೆ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನಿಸಿದೆ ಎಂದು ಹೇಳಲಾಗುತ್ತಿದೆ.
Related Articles
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನ ಬಂಗಾಳ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ, ಮಾಜಿ ಲೋಕಸಭಾ ಸಂಸದ ಮುಖರ್ಜಿ, “ನಾನು ಕಾಂಗ್ರೆಸ್ ನಲ್ಲಿಯೇ ಇರುತ್ತೇನೆ ಮತ್ತು ನಾನು ತೃಣಮೂಲಕ್ಕೆ ಸೇರುತ್ತೇನೆ ಅಥವಾ ಬೇರೆ ಯಾವುದೇ ಪಕ್ಷಕ್ಕೆ ಸೇರುತ್ತೇನೆ ಎಂಬ ವರದಿಗಳು ಸತ್ಯಕ್ಕೆ ದೂರವಾದದ್ದು” ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಪಿಟಿಐ ಗೆ ಅವರು ಹೇಳಿಕೆ ನೀಡಿದ್ದಾರೆ.
ಇನ್ನು, , ಈಗ ತೃಣ ಮೂಲಕ್ಕೆ ಸೇರ್ಪಡೆಗೊಂಡ ಅಂದು ತನ್ನ ತಂದೆಯವರ ಕಾಂಗ್ರೆಸ್ ಸಹೋದ್ಯೋಗಿಗಳಾಗಿದ್ದ ಕೆಲವರು ತಮ್ಮೊಂದಿಗೆ ಟೀ ಪಾರ್ಟಿ ನಡೆಸಿದ್ದ ಕಾರಣದಿಂದ ವದಂತಿಗಳು ಹಬ್ಬರಬಹುದಾಗಿ ಅವರು ಹೇಳಿದ್ದಾರೆ.
2012 ರಲ್ಲಿ ತಂದೆ ಪ್ರಣಬ್ ಮುಖರ್ಜಿ ಅವರಿಂದ ಸಂಸದ ಸ್ಥಾನ ತೆರವುಗೊಂಡ ನಂತರ ಅಭಿಜಿತ್ ಮುಖರ್ಜಿ ಜಂಗೀಪುರ ಸಂಸದೀಯ ಕ್ಷೇತ್ರದಲ್ಲಿ ಉಪಚುನಾವಣೆಗಳನ್ನು ಗೆದ್ದಿದ್ದರು ಹಾಗೂ 2014 ರಲ್ಲಿ ಮತ್ತೆ ಸಂಸದರಾಗಿ ಆಯ್ಕೆಯಾದರು. ಆದರೇ, 2019 ರಲ್ಲಿ ತೃಣಮೂಲದ ಖಲೀಲೂರ್ ರಹಮಾನ್ ವಿರುದ್ಧ ಸೋತಿದ್ದರು.
ಇದನ್ನೂ ಓದಿ : ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮಾನವ ಹಕ್ಕುಗಳ ಹೋರಾಟಗಾರ ಸ್ವಾಮಿ ನಿಧನ