Advertisement

ಸಮಗ್ರ ಅಭಿವೃದ್ದಿಗೆ ಪ್ರಮೋದ್‌ ಗೆಲುವು ಅಗತ್ಯ: ತೋನ್ಸೆ

09:50 PM Apr 05, 2019 | Sriram |

ಬ್ರಹ್ಮಾವರ: ಶಾಸಕರಾಗಿ, ಮಂತ್ರಿಯಾಗಿ ಓರ್ವ ಮಾದರಿ ಜನಪ್ರತಿನಿಧಿ ಯಾಗಿ ಜಿಲ್ಲೆಯ ಸರ್ವ ತೋಮುಖ ಅಭಿವೃದ್ಧಿಗೆ ಕಾರಣರಾದ ಪ್ರಮೋದ್‌ ಮಧ್ವರಾಜ್‌ ಅವರನ್ನು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಾಗಿ ದುಡಿಯಬೇಕಾಗಿದೆ ಎಂದು ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ ಹೇಳಿದರು.

Advertisement

ಅವರು ಬ್ರಹ್ಮಾವರ ಬ್ಲಾಕ್‌ನ ಆರೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಮೋದಿ ಮರಳು ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಅವರು ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಮೋದಿ ನೇತೃತ್ವದ ಸರಕಾರ ಜನರನ್ನು ಮರಳು ಮಾಡಿದ್ದು ಬಿಟ್ಟರೆ ಜನರ ಸ್ಥಿತಿಗತಿ ಬದಲಾವಣೆಯ ಕುರಿತು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಅಸಮರ್ಪಕ ನೀತಿಗಳಿಂದಾಗಿ ದೇಶದ ಜನತೆ ಸಮಸ್ಯೆಗಳನ್ನು ಅನುಭವಿಸುತ್ತಿರುವುದಲ್ಲದೆ ಅವರ ಜನಜೀವನವೇ ದುಸ್ತರವಾಗಿದೆೆ ಎಂದರು.

ಬಹ್ಮಾವರ ಬ್ಲಾಕ್‌ ಚುನಾವಣಾ ಉಸ್ತುವಾರಿ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಪ್ರಖ್ಯಾತ್‌ ಶೆಟ್ಟಿ ಮಾತನಾಡಿ, ಅಭಿವೃದ್ದಿಗೆ ಮತ್ತೂಂದು ಹೆಸರೇ ಪ್ರಮೋದ್‌ ಮಧ್ವರಾಜ್‌ ಆಗಿದ್ದು ಅವರ ಅವ ಧಿಯಲ್ಲಿ ಉಡುಪಿ ಕ್ಷೇತ್ರ ಸರ್ವತೋಮುಖ ಅಭಿವೃದ್ಧಿಯನ್ನು ಕಂಡಿದೆ. ಅಭಿವೃದ್ಧಿಪರ ದೃಷ್ಟಿಕೋನವಿಲ್ಲದ ನಿಷ್ಕ್ರಿಯ ಸಂಸದೆ ಶೋಭಾ ಕರಂದ್ಲಾಜೆಯನ್ನು ಶತಾಯಗತಾಯ ಸೋಲಿಸಲು ಒಗ್ಗಾಟ್ಟಾಗಿ ಶ್ರಮಿಸೋಣ ಎಂದರು.

ಕೆಪಿಸಿಸಿ ಕಾರ್ಯದರ್ಶಿ ವೆರೋನಿಕಾ ಕರ್ನೆಲಿಯೊ, ಕಲ್ಯಾಣಪುರ ಜಿ.ಪಂ. ಕ್ಷೇತ್ರದ ಉಸ್ತುವಾರಿ ರಮೇಶ್‌ ಶೇಟ್‌, ಸೂರ್ಯ ಸಾಲಿಯಾನ್‌, ರಮೇಶ್‌ ಶೆಟ್ಟಿ, ಕಾಂಗ್ರೆಸ್‌ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next