Advertisement

ಹಿಂದೂ ತರುಣರ ಹತ್ಯೆಗೆ ಯತ್ನ; ಠಾಣೆಗೆ ದಾಳಿ ಪ್ರಕರಣ ಎನ್‌ಐಎ ವ್ಯಾಪ್ತಿಗೆ: ಮುತಾಲಿಕ್‌ ಆಗ್ರಹ

01:19 PM Oct 24, 2022 | Team Udayavani |

ಉಪ್ಪಿನಂಗಡಿ : ಕಳೆದ 2021ರ ಡಿ. 6ರಂದು ಉಪ್ಪಿನಂಗಡಿಯ ಮೀನು ಮಾರಾಟ ಮಳಿಗೆಗೆ ದಾಳಿ ನಡೆಸಿ ಮೂವರು ಹಿಂದೂ ತರುಣರ ಹತ್ಯಾ ಯತ್ನ ಪ್ರಕರಣ ಹಾಗೂ ಈ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಕ್ಕೆ ಡಿ. 14ರಂದು ದಿನವಿಡೀ ಪೊಲೀಸ್‌ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ರಾತ್ರಿ ವೇಳೆ ಠಾಣೆಗೆ ದಾಳಿ ನಡೆಸಿದ ಪ್ರಕರಣದ ಹಿಂದಿನ ಶಕ್ತಿಗಳನ್ನು ಕಾನೂನು ಕ್ರಮಕ್ಕೆ ಒಳಪಡಿಸಲು ಇಡೀ ಪ್ರಕರಣವನ್ನು ಎನ್‌ಐಎ ತನಿಖಾ ವ್ಯಾಪ್ತಿಗೆ ತರಲು ಸರಕಾರ ಮುಂದಾಗಬೇಕೆಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಆಗ್ರಹಿಸಿದ್ದಾರೆ.

Advertisement

ರವಿವಾರ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇಗುಲಕ್ಕೆ ಭೇಟಿ ನೀಡಿ ಮಾತನಾಡಿದ ಅವರು ದೇಶ ದ್ರೋಹಿ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಸರಕಾರ ಶೂನ್ಯ ಸಂವೇದನೆಯನ್ನು ಪ್ರದರ್ಶಿಸಬೇಕು ಎಂದವರು ಆಗ್ರಹಿಸಿದರು.

ಮುತಾಲಿಕ್‌ ಅವರಿಗೆ ದೇಗುಲದ ವತಿಯಿಂದ ವ್ಯವಸ್ಥಾಪನ ಸಮಿತಿಯ ಸದಸ್ಯ ಜಯಂತ ಪೊರೋಳಿ ಹಾಗೂ ಹರಿರಾಮಚಂದ್ರ ಶಾಲು ಹಾಕಿ ಗೌರವಿಸಿದರು.

ಹಿಂದೂ ಜಾಗರಣ ವೇದಿಕೆಯ ಸಂದೀಪ್‌ ಕುಪ್ಪೆಟ್ಟಿ, ಅನಿಲ್‌, ಚಿದಾನಂದ, ನವೀನ್‌, ಅನಿಲ್‌, ರಂಜಿತ್‌ ಅಡೆಕ್ಕಲ್‌, ಗಣೇಶ್‌ ಬೊಳ್ಳಾರ್‌, ಧನ್ಯರಾಜ್‌, ನಿತಿನ್‌ ಇಳಂತಿಲ, ದಿನೇಶ್‌ ಜೈನ್‌, ನವೀನ್‌ ರೈ, ಕೃಷ್ಣಪ್ರಸಾದ್‌ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ : ನ. 7: ಬೈಂದೂರಿಗೆ ಸಿಎಂ ಬೊಮ್ಮಾಯಿ: ಸಾವಿರ ಕೋ.ರೂ.ಗೂ ಮಿಕ್ಕಿ ಅನುದಾನದ ಕಾಮಗಾರಿಗೆ ಚಾಲನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next